ಮುಳುಗುತ್ತಿದ್ದ ಹಡಗು ದಡಸೇರಿತು; ‘ಮೈಸೂರುಸಿಲ್ಕ್’ ಕೋರೈಸುತ್ತಿದೆ!
ಮುಳುಗುತ್ತಿದ್ದ ಹಡಗು ದಡಸೇರಿತು; ‘ಮೈಸೂರುಸಿಲ್ಕ್’ ಕೋರೈಸುತ್ತಿದೆ!
ವರ್ಷದ ಹಿಂದೆ ಸಂಕಷ್ಟದಲ್ಲಿದ್ದ ಕೆಎಸ್ಐಸಿ ಮೋರೆಯಲ್ಲೀಗ ದೀಪಾವಳಿ ಬೆಳಕು
ವರ್ಷದ ಹಿಂದೆ ತೀವ್ರ ನಷ್ಟದಲ್ಲಿದ್ದ ಮೈಸೂರು ಸಿಲ್ಕ್ಗೆ ಬಾಗಿಲಿಗೆ ಬೀಗ ಹುಡುಕುವ ಪರಿಸ್ಥಿತಿ ಬಂದಿತ್ತು. ಅಧಿಕ ಕಾರ್ಮಿಕರು- ನೌಕರರು, ನಿಗಮದಲ್ಲಿನ ಅವ್ಯವಹಾರ, ಭ್ರಷ್ಟಾಚಾರ, ನೌಕರರ ಅಸಡ್ಡೆ, ಜನರ ಅಭಿರುಚಿಗೆ ಸ್ಪಂದಿಸದೇ ಹಳೇ ವಿನ್ಯಾಸಗಳಿಗೆ ನೇತುಬಿದ್ದದ್ದು, ಇವೆಲ್ಲಾ ನಿಗಮದ ಅವಸಾನದ ಹಾದಿಗೆ ಕಾರಣವಾಗಿತ್ತು. ಸುಮಾರು 21.91 ಕೋಟಿ ಸಾಲದ ಹೊರೆ ನಿಗಮದ ಮೇಲಿತ್ತು.
ಸರಕಾರ ಕೆಎಸ್ಐಸಿಗೆ ಪುನರುಜ್ಜೀವನ ನೀಡಲು ಮುಂದಾಯಿತು. ಚನ್ನಪಟ್ಟಣ ಮತ್ತು ಕನಕಪುರ ಘಟಕಗಳ ಮುಚ್ಚಲಾಯಿತು. ಸುಮಾರು 850 ನೌಕರರಿಗೆ ಸ್ವಯಂ ನಿವೃತ್ತಿ ನೀಡಲಾಯಿತು. ಸರಕಾರದ ಬಲ, ಕಾರ್ಮಿಕರು ಹಾಗೂ ನೌಕರರ ಸತತ ಶ್ರಮದ ಪರಿಣಾಮ ನಿಗಮಕ್ಕೆ ಹಿಡಿದಿದ್ದ ಗ್ರಹಣ ಬದಿಗೆ ಸರಿಯಿತು. 2004 ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ 25 ಸಾವಿರ ಸೀರೆಗಳನ್ನು ಉತ್ಪಾದಿಸಲಾಗಿದ್ದು, ಸುಮಾರು 10.5 ಕೋಟಿ ರೂ. ವಹಿವಾಟು ನಡೆದಿದೆ. ಹಂತ ಹಂತವಾಗಿ ಸಾಲದ ಪ್ರಮಾಣ ತಗ್ಗುತ್ತಿದೆ. ಭರವಸೆ ಚಿಗುರುತ್ತಿದೆ.
ಖಾಸಗಿಯವರಿಗೆ ಪೈಪೋಟಿ ನೀಡಲು ಹೊಸ ಬೆಡಗಿನೊಂದಿಗೆ ಮೈಸೂರು ಸಿಲ್ಕ್ ಮಾರುಕಟ್ಟೆ ಪ್ರವೇಶಿಸಿದೆ. ಕ್ರೇಪ್, ಟ್ವಿಸ್ಟೆಡ್, ಸ್ಮಾಲ್ ಚೆಕ್ಸ್, ರಿಚ್ ಪಲ್ಲು ಸೇರಿದಂತೆ ಹೊಸ ಬಣ್ಣ, ಹೊಸ ವಿನ್ಯಾಸದೊಂದಿಗೆ ವನಿತೆಯರ ಮನಸ್ಸನ್ನು ಮೈಸೂರು ಸಿಲ್ಕ್ ಮತ್ತೆ ಆಕರ್ಷಿಸುತ್ತಿದೆ.
ಅಂದ ಹಾಗೆ, ಇನ್ನು ಮುಂದೆ ಮೈಸೂರು ಸಿಲ್ಕ್ ಸೀರೆಗಳು ಡೀಲರ್ಗಳ ಬಳಿ ದೊರೆಯುವುದಿಲ್ಲ. ನಕಲಿಗಳ ಹಾವಳಿಯನ್ನು ತಪ್ಪಿಸಲು ಈ ವ್ಯವಸ್ಥೆಯನ್ನು ಕೈಬಿಡಲಾಗಿದೆ. ಈಗ, ಮೈಸೂರು ಸಿಲ್ಕ್ ಉತ್ಪನ್ನ ಅಧಿಕೃತ ಷೋರೂಂಗಳಲ್ಲಿ ಮಾತ್ರ ಲಭ್ಯ.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications