ಚುನಾವಣೆ ನಂತರ ಮೌನವಾಗಿದ್ದ ಟಿಪ್ಪು ಖಡ್ಗ ಮತ್ತೆ ಸುದ್ದಿಯಲ್ಲಿದೆ !
ಚುನಾವಣೆ ನಂತರ ಮೌನವಾಗಿದ್ದ ಟಿಪ್ಪು ಖಡ್ಗ ಮತ್ತೆ ಸುದ್ದಿಯಲ್ಲಿದೆ !
ವಿಜಯ ಮಲ್ಯ ನಾಡಿಗೆ ಮರಳಿ ತಂದ ಟಿಪ್ಪುಖಡ್ಗಕ್ಕೆ ಸೀಮಾ ಸುಂಕದ ಬಿಸಿ
ದೇಶೀಯ ಮತ್ತು ವಿದೇಶೀಯ ಮೂಲದ ಯಾವುದೇ ವಸ್ತುವಿರಲಿ, ಆಮದು ಮಾಡಿಕೊಂಡ ಪ್ರತಿ ಸರಕಿಗೂ ಸೀಮಾ ಸುಂಕ ಅನ್ವಯಿಸುತ್ತದೆ. ಆಮದು ಪರವಾನಗಿಯ ವಿಧಿವಿಧಾನಗಳನ್ನು ಮಲ್ಯ ಪೂರೈಸಿಲ್ಲ. ಖಡ್ಗದ ಮೌಲ್ಯ ಸೂಚಿಸಿರುವ ಕಸ್ಟಮ್ಸ್ ಇಲಾಖೆ, ಮಲ್ಯ ಪ್ರತಿಕ್ರಿಯೆಯನ್ನು ಕಾಯುತ್ತಿದೆ.
ಭಾರತ ಸರಕಾರ ವಿನಾಯಿತಿ ಪ್ರಕಟಿಸಿದರೆ ನಮ್ಮದೇನೂ ಅಭ್ಯಂತರವಿಲ್ಲ. ಮಲ್ಯ ಸುಂಕ ವಿನಾಯಿತಿಗೆ ಮನವಿ ಸಲ್ಲಿಸಿಲ್ಲ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
1799 ರಲ್ಲಿ ನಡೆದ ಶ್ರೀರಂಗ ಪಟ್ಟಣದ ಕಾಳಗದಲ್ಲಿ ಟಿಪ್ಪು ಸುಲ್ತಾನ್ ಸಾವನ್ನಪ್ಪಿದ ನಂತರ, ಈ ಖಡ್ಗ ಬ್ರಿಟನ್ ತಲುಪಿತ್ತು. ಲಂಡನ್ನಲ್ಲಿ ನಡೆದ ಹರಾಜಿನಲ್ಲಿ ಗೆದ್ದು , ಡಾ. ವಿಜಯಮಲ್ಯ ಐತಿಹಾಸಿಕ ಖಡ್ಗವನ್ನು ನಾಡಿಗೆ ಮರಳಿ ತಂದಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications