ಜೆಡಿಎಸ್‌ ಪಟ್ಟಿ ಸಿದ್ಧ, ಸಂಪುಟ ವಿಸ್ತರಿಸಿ ಧರ್ಮ ಪಾಲಿಸಿ-ಸಿದ್ಧರಾಮಯ್ಯ

ಜೆಡಿಎಸ್‌ ಪಟ್ಟಿ ಸಿದ್ಧ, ಸಂಪುಟ ವಿಸ್ತರಿಸಿ ಧರ್ಮ ಪಾಲಿಸಿ-ಸಿದ್ಧರಾಮಯ್ಯ
ಪಟ್ಟಿ ನೀಡಿದ ಗಂಟೆಯಾಳಗೆ ಸಂಪುಟ ವಿಸ್ತರಣೆ ಎಂದ ಧರ್ಮಸಿಂಗ್‌ ಮುಂದೇನು ?

ಬೆಂಗಳೂರು : ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಸಮ್ಮಿಶ್ರ ಸರಕಾರದಲ್ಲಿ ಸಂಪುಟ ವಿಸ್ತರಣೆಯ ಗೊಂದಲ ದಿನೇ ದಿನೇ ಹೆಚ್ಚುತ್ತಿದೆ. ಜೆಡಿಎಸ್‌ ಪಟ್ಟಿ ನೀಡಿದ ಕೇವಲ ಗಂಟೆಯಾಳಗೆ ಸಂಪುಟ ವಿಸ್ತರಣೆ ಮಾಡುವುದಾಗಿ ಗುರುವಾರ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಹೇಳಿಕೆ ನೀಡಿದ್ದರು. ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿರುವ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ, ನಮ್ಮ ಪಟ್ಟಿ ಸಿದ್ಧವಿದೆ ಎಂದು ಸವಾಲಿನಂತೆ ಶುಕ್ರವಾರ(ನ.5) ಪ್ರತಿಕ್ರಿಯಿಸಿದ್ದಾರೆ.

ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಿನ ಮುಸುಕಿನೊಳಗಿನ ಗುದ್ದಾಟ ಹೇಳಿಕೆಗಳ ಸಮರದಲ್ಲಿ ಹೊಸ ತಿರುವನ್ನು ಪಡೆದಿದೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ವಿಸ್ತರಣೆಗೆ ಜೆಡಿಎಸ್‌ ಕಡೆಯಿಂದ ಯಾವುದೇ ಅಡ್ಡಿಗಳಿಲ್ಲ. ಶನಿವಾರ(ನ.6) ನಮ್ಮ ಪಟ್ಟಿಯಾಂದಿಗೆ ಮುಖ್ಯಮಂತ್ರಿ ಧರ್ಮಸಿಂಗ್‌ರನು ್ನ ಈ ಸಂಬಂಧ ಭೇಟಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಗುರುವಾರ ನಡೆದ ಜೆಡಿಎಸ್‌ ಶಾಸಕಾಂಗ ಸಭೆಯಲ್ಲಿ, ಆರು ತಿಂಗಳಾದರೂ ಮಂತ್ರಿಮಂಡಲ ವಿಸ್ತರಣೆಯಾಗದ ಬಗೆಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಮಹಾರಾಷ್ಟ್ರ ಮತ್ತು ಬೀದರ್‌ಚುನಾವಣೆ ಹಿನ್ನೆಲೆಯಲ್ಲಿ ಮಸುಕಾಗಿದ್ದ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಧರ್ಮಸಿಂಗ್‌ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

(ಪಿಟಿಐ)

ಮುಖಪುಟ / ಧರ್ಮ-ಕಾರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+