ಮುಂದಿನ ಜನಾಂಗಕ್ಕೆ ಹಂಪಿ ಕಾದಿಡಲು ಸರ್ಕಾರ ಬದ್ಧ - ಧರ್ಮಸಿಂಗ್
ಮುಂದಿನ
ಜನಾಂಗಕ್ಕೆ
ಹಂಪಿ
ಕಾದಿಡಲು
ಸರ್ಕಾರ
ಬದ್ಧ
-
ಧರ್ಮಸಿಂಗ್
ಹಂಪಿ
ಅಭಿವೃದ್ಧಿ
ಪ್ರಾಧಿಕಾರಕ್ಕೆ
2
ಕೋಟಿ
ರು.
ಅನುದಾನ
ನ.3ರ ಬುಧವಾರ ಪ್ರಾರಂಭವಾದ ಹಂಪಿ ಉತ್ಸವ-2004ಕ್ಕೆ ಲಕ್ಕಣ್ಣ ದಂಡೇಶ್ ವೇದಿಕೆಯಲ್ಲಿ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಧರ್ಮಸಿಂಗ್- ಮುಂದಿನ ಪೀಳಿಗೆಗೆ ಹಂಪಿಯನ್ನು ಕಾಯ್ದಿಡಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರ ರೂಪಿಸಿದ್ದು , 2 ಕೋಟಿ ರುಪಾಯಿ ಅನುದಾನ ನೀಡಲಿದೆ ಎಂದು ಹೇಳಿದರು.
ಹಂಪಿ ವಿಶ್ವ ಪರಂಪರೆ ನಕಾಶೆಯಲ್ಲಿದೆ. ಹಂಪಿಯ ಸಮಗ್ರ ಅಭಿವೃದ್ಧಿಗಾಗಿ 10 ಕೋಟಿ ರುಪಾಯಿ ನೀಡುವುದಾಗಿ ಕೇಂದ್ರ ಪ್ರವಾಸೋದ್ಯಮ ಸಚಿವೆ ರೇಣುಕಾ ಚೌಧುರಿ ತಮ್ಮ ಇತ್ತೀಚಿನ ಪ್ರವಾಸದಲ್ಲಿ ತಿಳಿಸಿದ್ದರು. ಪತ್ರ ಬರೆಯುವ ಮೂಲಕ ಅವರಿಗೆ ತಮ್ಮ ಆಶ್ವಾಸನೆಯನ್ನು ನೆನಪಿಸುವುದಾಗಿ ಧರ್ಮಸಿಂಗ್ ತಿಳಿಸಿದರು.
ಕಳೆದ ಮೂರು ವರ್ಷಗಳ ಸತತ ಬರದಿಂದ ಹಂಪಿ ಉತ್ಸವ ಕಳೆಗೆಟ್ಟಿರುವುದನ್ನು ಒಪ್ಪಿಕೊಂಡ ಧರ್ಮಸಿಂಗ್, ಮುಂದಿನ ದಿನಗಳಲ್ಲಿ ಮೈಸೂರು ದಸರಾ ಮಾದರಿಯಲ್ಲಿ ಹಂಪಿ ಉತ್ಸವವನ್ನೂ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು