ಚಂಪಾ
ಚಂಪಾ Vs ನಲ್ಲೂರು: ಕನ್ನಡಸಾಹಿತ್ಯಪರಿಷತ್ ಅಧ್ಯಕ್ಷಪೀಠ ಯಾರಿಗೆ?
ಓಟು ಸಂಘಟಕರಿಗೊ ಸಾಹಿತಿಗೊ.... ಅ.31ರಂದು ಮತದಾನ
ಕಸಾಪ ಅಧ್ಯಕ್ಷ ಸ್ಥಾನವು ಯಾರಿಗೆ ಸೂಕ್ತ? ಅದು ಸಂಘಟಕರಿಗೆ/ಸಾಹಿತಿಗಳಿಗೆ ದಕ್ಕ ಬೇಕೇ ಎಂಬ ಪ್ರಶ್ನೆ ಕಳೆದ ಸಲದಂತೆ ಈ ಬಾರಿಯೂ ಮತದಾರರನ್ನು ಕಾಡುತ್ತಿದೆ. ಮತದಾರ ಪ್ರಭು ಕಳೆದ ಚುನಾವಣೆಯಲ್ಲಿ ಈ ಪ್ರಶ್ನೆಗೆ ಸಂಘಟಕರ ಪರವಾಗಿ ಉತ್ತರಿಸಿದ್ದ. ಈ ಬಾರಿಯ ಉತ್ತರ ?
ಈ ಸಲದ ಚುನಾವಣೆಯಲ್ಲಿ ಸಾಹಿತಿ ಚಂದ್ರಶೇಖರ್ ಪಾಟೀಲ(ಚಂಪಾ) ಮತ್ತು ಸಂಘಟನಾ ಚತುರ ಡಾ. ನಲ್ಲೂರು ಪ್ರಸಾದ್ ನಡುವೆ ಮೇಲ್ನೋಟಕ್ಕೆ ತೀವ್ರ ಸ್ಪರ್ಧೆ ಕಂಡುಬಂದಿದೆ. ಕಳೆದ ಚುನಾವಣೆಯಲ್ಲಿ ಹರಿಕೃಷ್ಣ ಪುನರೂರು ವಿರುದ್ಧ ಸೋತಿದ್ದ ಚಂಪಾ ಸುತ್ತ ಈಗ ಅನುಕಂಪದ ಅಲೆ ನಿರ್ಮಾಣಗೊಂಡಿದೆ.
ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದ ನಡುವಿನ ಸಮರವೆಂಬಂತೆ, ಉತ್ತರ ಕರ್ನಾಟಕವನ್ನು ಚಂಪಾ ಮತ್ತು ದಕ್ಷಿಣ ಕರ್ನಾಟಕವನ್ನು ನಲ್ಲೂರು ಪ್ರಸಾದ್ ಪ್ರತಿನಿಧಿಸಿದ್ದಾರೆ. ಆದರೆ ಪ್ರಾದೇಶಿಕ ಗಡಿಯನ್ನು ದಾಟಿ ಬೆಂಬಲ ಪಡೆಯುವಲ್ಲಿ ಇಬ್ಬರೂ ಸಫಲರಾಗಿದ್ದಾರೆ. ಬೆಂಗಳೂರು, ಹಾಸನ, ಮಂಡ್ಯ, ಮೈಸೂರು, ದಕ್ಷಿಣ ಕರ್ನಾಟಕದಲ್ಲಿ ನಲ್ಲೂರು ಪ್ರಸಾದ್ ಸಂಪರ್ಕಜಾಲ ಹೊಂದಿದ್ದಾರೆ.
ಹೈದರಾಬಾದ್ ಕರ್ನಾಟಕ, ಮುಂಬೈ, ಉತ್ತರ ಕರ್ನಾಟಕದಲ್ಲಿ ಚಂಪಾ ಅಲೆ ಗಟ್ಟಿಯಾಗಿದೆ. ಚಂಪಾ ತವರು ನೆಲ ಧಾರವಾಡ ನಲ್ಲೂರು ಪ್ರಸಾದ್ಗೆ ವಾಲಿರುವುದು ವಿಚಿತ್ರವಾಗಿದೆ. ಡಾ.ಪಾಟೀಲ ಪುಟ್ಟಪ್ಪ ನಲ್ಲೂರರಿಗೆ ಬಹಿರಂಗ ಬೆಂಬಲ ಪ್ರಕಟಿಸಿದ್ದಾರೆ.
ಚಂಪಾ ಮೇಲಿನ ಸಿಟ್ಟಿನಿಂದಾಗಿ ಪಾಟೀಲ್ಪುಟ್ಟಪ್ಪ ನಲ್ಲೂರು ಪ್ರಸಾದ್ರನ್ನು ಬೆಂಬಲಿಸಿದ್ದರೆ, ಕ.ಸಾ.ಪ. ಗೌರವ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಡಾ.ಪುಂಡಲೀಕ ಹಾಲಂಬಿ ಚಂಪಾ ಪರ ನಿಂತಿದ್ದಾರೆ.
ಜಾನಪದ ವಿದ್ವಾಂಸ ಸೋಮಶೇಖರ ಇಮ್ರಾಪುರ ಅವರ ಲೇಖನ ಕೃತಿಚೌರ್ಯ ಮಾಡಿದ್ದರೆಂಬ ಆರೋಪ ನಲ್ಲೂರರ ಬಗ್ಗೆ ಈ ಮುನ್ನ ಕೇಳಿ ಬಂದಿತ್ತು. ಚಂಪಾ ಅವರದು ಬೇರೆಯೇ ಕಥೆ. ಈ ಬಂಡಾಯಗಾರ ಮಹಾನ್ ಜಗಳಗಂಟಿ. ಈ ಜಗಳಗಂಟಿತನವೇ ಅವರಿಗೆ ಪ್ರತಿಕೂಲವಾಗಿ ಪರಿಣಮಿಸಿದರೆ ಆಶ್ಚರ್ಯವಿಲ್ಲ . ಯು.ಆರ್.ಅನಂತಮೂರ್ತಿ, ಗೊ.ರು.ಚನ್ನಬಸಪ್ಪ , ಪಿ.ವಿ.ನಾರಾಯಣ, ನಾಗತಿಹಳ್ಳಿ ಚಂದ್ರಶೇಖರ ಮುಂತಾದವರು ನಲ್ಲೂರು ಪರವಿದ್ದಾರೆ ಎನ್ನುವುದಕ್ಕಿಂತ ಚಂಪಾ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಸೂಕ್ತ.
ಚಂಪಾ ತಮ್ಮ ಸಂಕ್ರಮಣ ಮೂಲಕ ರಾಜ್ಯಾದ್ಯಂತ ಸಾಹಿತ್ಯವಲಯವನ್ನು ರೂಪಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಘರ್ಜಿಸಿದ್ದ ಚಂಪಾ, ಸಾಹಿತ್ಯ ಮತ್ತು ಸಂಘಟನೆ ಎರಡರಲ್ಲೂ ಎತ್ತಿದ ಕೈ. ಅಂತೆಯೇ ರಾಜ್ಯ ಕ.ಸಾ.ಪ. ಗೌರವ ಕಾರ್ಯದರ್ಶಿಯಾಗಿ ಅನುಭವ ಹೊಂದಿರುವ ನಲ್ಲೂರು ಪ್ರಸಾದ್ ಶ್ರೇಷ್ಠ ಸಂಘಟಕರೆನ್ನುವುದರಲ್ಲಿ ಎರಡು ಮಾತಿಲ್ಲ.
ಗುಲ್ಪರ್ಗಾದ ಲಕ್ಷ್ಮಣ ರಾವ್ ಗೋಗಿ, ಲೇಖಕ ಅಜ್ಜಂಪುರ ಸೂರಿ, ಪ್ರೊ. ಶಂಕರಯ್ಯ, ಬಿ.ನಾರಾಯಣಮ್ಮ, ಹರಿಹರಪ್ರಿಯ, ಪ್ರೊ. ನಿ.ಗಿರೀಗೌಡ, ಹಲ್ಲೇಕೆರೆ ಶಂಕರ್ ಸಹಾ ಕಣದಲ್ಲಿದ್ದಾರೆ. ಸುಮಾರು 40 ಸಾವಿರಕ್ಕೂ ಅಧಿಕ ಮತದಾರರನ್ನು ಪರಿಷತ್ತು ಹೊಂದಿದೆ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯಾ? ಖಾತ್ರಿ ಪಡಿಸಿಕೊಳ್ಳಿ, ಮತದಾನ ನೆರವೇರಲಿ!
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications