ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ಬೇಟೆಗಾರ ವಿಜಯಕುಮಾರ್‌ಗೆ ಧರ್ಮಸಿಂಗ್‌ರಿಂದ ಸನ್ಮಾನ

By Staff
|
Google Oneindia Kannada News

ವೀರಪ್ಪನ್‌ ಬೇಟೆಗಾರ ವಿಜಯಕುಮಾರ್‌ಗೆ ಧರ್ಮಸಿಂಗ್‌ರಿಂದ ಸನ್ಮಾನ
ಆಪರೇಷನ್‌ ಕಾಕೂನ್‌ ಯೋಜನೆ ವೀರಪ್ಪನ್‌ನನ್ನು ಕೊಲ್ಲುವುದಾಗಿರಲಿಲ್ಲ

ಬೆಂಗಳೂರು : ಕಾಡುಗಳ್ಳ ವೀರಪ್ಪನ್‌ ಹಿಂದೆ ಸುತ್ತಿ ಬೇಸತ್ತಿದ್ದ ಎಸ್‌ಟಿಎಫ್‌ಗೆ ಕೊನೆಗೂ ವಿರಾಮ ಸಿಕ್ಕಿದೆ. ಸನ್ಮಾನ-ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ವೀರಪ್ಪನ್‌ ಸಂಹಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ಎಸ್‌ಟಿಎಫ್‌ ಮುಖ್ಯಸ್ಥ ವಿಜಯಕುಮಾರ್‌ರನ್ನು ನಗರದಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್‌, ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಕುಮಾರ್‌, ಸರಕಾರ ವಹಿಸಿದ್ದ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿದ್ದೇವೆ. ವೀರಪ್ಪನ್‌ ಹುದುಗಿಸಿಟ್ಟ ಹಣ ಹಾಗೂ ಶಸ್ತ್ರಾಸ್ತ್ರಗಳ ಶೋಧನೆ ನಡೆಸುವುದು ನಮ್ಮ ಕೆಲಸವಲ್ಲ ಎಂದರು.

ಕಾಡುಗಳ್ಳ ವೀರಪ್ಪನ್‌ನನ್ನು ಕೊಲ್ಲುವುದು ನಮ್ಮ ಗುರಿಯಾಗಿರಲಿಲ್ಲ. ವೀರಪ್ಪನ್‌ ದಿಢೀರ್‌ ಗುಂಡಿನ ಮಳೆ ಸುರಿಸಿದ ಕಾರಣ, ನಾವು ಪ್ರತಿದಾಳಿ ಮಾಡಬೇಕಾಯಿತು. ವೀರಪ್ಪನ್‌ ಹತ್ಯೆಯ ಬಗೆಗೆ ಮಾನವ ಹಕ್ಕುಗಳ ಹೆಸರಲ್ಲಿ ತನಿಖೆ ನಡೆಸುವುದು ಅರ್ಥಹೀನ. ವೀರಪ್ಪನ್‌ ಸಂಹಾರದ ಎಲ್ಲಾ ಕೀರ್ತಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸಲ್ಲಬೇಕು ಎಂದು ವಿಜಯಕುಮಾರ್‌ ಹೇಳಿದರು.

(ಪಿಟಿಐ)

ಮುಖಪುಟ / ವೀರಪ್ಪನ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X