Get Updates
Get notified of breaking news, exclusive insights, and must-see stories!

ಚಿಕ್ಕಮಗಳೂರು: ಮತ್ತೊಂದು ದತ್ತ ಹುತ್ತ, ಶಾಸಕನಿಂದಆತ್ಮಾಹುತಿ ಯತ್ನ

ಚಿಕ್ಕಮಗಳೂರು: ಮತ್ತೊಂದು ದತ್ತ ಹುತ್ತ, ಶಾಸಕನಿಂದಆತ್ಮಾಹುತಿ ಯತ್ನ
ದತ್ತಾತ್ರೇಯ ವಿಗ್ರಹ ಸಂಪೂರ್ಣ ತೆರವು, ಮಂಟಪ ನಾಶ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಬಾಬಾಬುಡನ್‌ಗಿರಿಯಲ್ಲಿ ದತ್ತಪೀಠದ ವಿವಾದ ಜೀವಂತವಾಗಿರುವಾಗಲೇ, ಮತ್ತೊಂದು ದತ್ತ ವಿವಾದ ಹುತ್ತಗಟ್ಟಿದೆ.

ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ದತ್ತಮಾಲೆ ಅಭಿಯಾನ ಈ ವರ್ಷ ಕಾವೇರಿತ್ತು. ಬಿಜೆಪಿ ಮತ್ತು ಸಂಘ ಪರಿವಾರ ವಿವಾದಾತ್ಮಕ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ್ದ ದತ್ತಾತ್ರೇಯ ವಿಗ್ರಹ ಮತ್ತು ಮಂಟಪವನ್ನು ಜಿಲ್ಲಾಡಳಿತ ಮಂಗಳವಾರ(ಅಕ್ಟೋಬರ್‌ 26) ಸಂಪೂರ್ಣವಾಗಿ ತೆರವುಗೊಳಿಸಿದೆ. ಈ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತ ಪಡಿಸಿ, ಆತ್ಮಹತ್ಯೆಗೆ ಪ್ರಯತ್ನಿಸಿದ ಶಾಸಕ ಸಿ.ಟಿ. ರವಿ ಸೇರಿದಂತೆ 38 ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ.

ವಿಜಯಪುರ ಬಡಾವಣೆಯ ದುರ್ಗಾದೇವಿ ಮಂಟಪದಲ್ಲಿ ದತ್ತಾತ್ರೇಯ ವಿಗ್ರಹದ ಪ್ರತಿಷ್ಠಾಪನೆಗೆ ಸಂಘಪರಿವಾರ ಅನುಮತಿ ಕೋರಿತ್ತು. ಶಾಂತಿಭಂಗವಾಗುವ ಸಾಧ್ಯತೆಗಳಿವೆ ಎಂದು ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ನಿರಾಕರಣೆಗೆ ಸೊಪ್ಪು ಹಾಕದೇ ಅದೇ ಪ್ರದೇಶದಲ್ಲಿ ದತ್ತಾತ್ರೇಯ ವಿಗ್ರಹವನ್ನು ದಿಢೀರ್‌ ಪ್ರತಿಷ್ಠಾಪಿಸಿ, ಮಂಟಪವನ್ನು ನಿರ್ಮಿಸಲಾಗಿತ್ತು. ಈ ವಿವಾದಾತ್ಮಕ ಪ್ರದೇಶ ಈದ್ಗಾ ಸಮಿತಿಗೆ ಸೇರಿದ್ದು /ನಗರಸಭೆಗೆ ಸೇರಿದ್ದು ಎಂಬ ಗೊಂದಲಗಳಿವೆ.

ಚಿಕ್ಕಮಗಳೂರು ಬಂದ್‌: ಈ ಘಟನೆಯ ಪರಿಣಾಮ ಚಿಕ್ಕಮಗಳೂರು ತಲ್ಲಣಗೊಂಡಿದೆ. ಉದ್ರಿಕ್ತ ವಾತಾವರಣದ ಹಿನ್ನೆಲೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರ ಬುಧವಾರ (ಅ.27) ಚಿಕ್ಕಮಗಳೂರು ಬಂದ್‌ಗೆ ಕರೆ ಕೊಟ್ಟಿವೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+