Get Updates
Get notified of breaking news, exclusive insights, and must-see stories!

ಧರ್ಮ ಪತನ ಸನ್ನಿಹಿತ ; 2005 ಏಪ್ರಿಲ್‌ನಲ್ಲಿ ಚುನಾವಣೆ -ಜ್ಯೋತಿಷಿ

ಧರ್ಮ ಪತನ ಸನ್ನಿಹಿತ ; 2005 ಏಪ್ರಿಲ್‌ನಲ್ಲಿ ಚುನಾವಣೆ -ಜ್ಯೋತಿಷಿ
ಸಂಪುಟ ವಿಸ್ತರಣೆಯೇ ಸರ್ಕಾರದ ಪತನಕ್ಕೆ ಮೂಲ

ಬೆಂಗಳೂರು : ಬೀದರ್‌ ಲೋಕಸಭಾ ಉಪಚುನಾವಣೆಯ ಫಲಿತಾಂಶದ ನಂತರ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ರ ತಾರಾಗತಿ ಕೋರೈಸುತ್ತಿದೆ ಎನ್ನುವ ಭಾವನೆ ರಾಜಕೀಯ ವಲಯದಲ್ಲಿ ಬಲವಾಗಿರುವ ಸಂದರ್ಭದಲ್ಲಿ , ಮೈತ್ರಿಕೂಟ ಸರಕಾರದ ಭವಿಷ್ಯ ಹತ್ತಿರಕ್ಕೆ ಬಂದಿದೆ ಎನ್ನುತ್ತಿದ್ದಾರೆ ತುಮಕೂರಿನ ಹೆಸರಾಂತ ಜ್ಯೋತಿಷಿ ಡಾ. ಜಿ. ಉಮಾಪತಿ ಶಾಸ್ತ್ರಿ.

ಉಮಾಪತಿ ಶಾಸ್ತ್ರಿಗಳು ಹೇಳಿರುವುದಿಷ್ಟು- ಕರ್ನಾಟಕದ ಜನ ಮುಂದಿನ ಚುನಾವಣೆಗೆ ಸಿದ್ಧರಾಗಬೇಕು. ಸರಕಾರ ಯಾವಾಗ ಬೇಕಾದರೂ ಉರುಳಬಹುದು, 2005ರ ಏಪ್ರಿಲ್‌ ವೇಳೆಗೆ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಗಳು ಹೆಚ್ಚು.

ಸಚಿವ ಸಂಪುಟ ವಿಸ್ತರಣೆ ಕಾಂಗ್ರೆಸ್‌ ಹಾಗೂ ಜಾತ್ಯತೀತ ಜನತಾದಳ ಪಕ್ಷಗಳ ನಡುವೆ ಅತೃಪ್ತಿ ಮೂಡಿಸಲಿದೆ. ಈ ಅತೃಪ್ತಿಯ ಪರಿಣಾಮ ಮೈತ್ರಿಕೂಟದ ಸರಕಾರ ಇಕ್ಕಟ್ಟಿಗೆ ಸಿಲುಕಲಿದೆ ಎಂದು ಶಾಸ್ತ್ರಿಗಳು ಹೇಳಿದ್ದಾರೆ.

ಮುಖ್ಯಮಂತ್ರಿ ಧರ್ಮಸಿಂಗ್‌ ಮತ್ತು ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾತಕಗಳ ಆಧಾರದ ಮೇಲೆ ಈ ಜ್ಯೋತಿಷ್ಯವನ್ನು ಉಮಾಪತಿ ಶಾಸ್ತ್ರಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+