ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇಂಟ್‌ಕಿಟ್ಸ್‌ ಕೇಸು ಖಲಾಸು! ಚಂದ್ರಸ್ವಾಮಿ ಮುಖದಲ್ಲಿ ನಗೆ ಹುಣ್ಣಿಮೆ

By Staff
|
Google Oneindia Kannada News

ಸೇಂಟ್‌ಕಿಟ್ಸ್‌ ಕೇಸು ಖಲಾಸು! ಚಂದ್ರಸ್ವಾಮಿ ಮುಖದಲ್ಲಿ ನಗೆ ಹುಣ್ಣಿಮೆ
ಚಂದ್ರಸ್ವಾಮಿಗೆ ವರವಾದ ಪೂರಕ ಸಾಕ್ಷಿಗಳ ಕೊರತೆ

ನವದೆಹಲಿ : ಸ್ವಯಂ ಘೋಷಿತ ದೇವಮಾನವ ಚಂದ್ರಸ್ವಾಮಿ ಮುಖದಲ್ಲೀಗ ಮುಗುಳುನಗೆಯ ಹುಣ್ಣಿಮೆ. ಅವರನ್ನು ಸೇಂಟ್‌ ಕಿಟ್ಸ್‌ ಪೋರ್ಜರಿ ಪ್ರಕರಣದಲ್ಲಿ ನಿರ್ದೋಷಿ ಎಂದು ದೆಹಲಿ ನ್ಯಾಯಾಲಯ ಸೋಮವಾರ(ಅಕ್ಟೋಬರ್‌ 25) ಘೋಷಿಸಿದೆ.

ಚಂದ್ರಸ್ವಾಮಿ ಅಪರಾಧಿ ಎನ್ನುವುದಕ್ಕೆ ಯಾವುದೇ ಪೂರಕ ಸಾಕ್ಷಿಗಳಿರಲಿಲ್ಲ. ಅವರನ್ನು ಆರೋಪದಿಂದ ಮುಕ್ತಗೊಳಿಸಿರುವುದಾಗಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ದಿನೇಶ್‌ ದಯಾಳ್‌ ಸೋಮವಾರ ತೀರ್ಪು ನೀಡಿದರು.

ಸತ್ಯಕ್ಕೆ ಜಯ : ಆರೋಪದಿಂದ ಮುಕ್ತರಾದ ಚಂದ್ರಸ್ವಾಮಿ ನ್ಯಾಯಾಲಯದ ಹೊರ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ವಿ.ಪಿ. ಸಿಂಗ್‌ ಸರಕಾರ ತಮ್ಮನ್ನು ಹಾಗೂ ರಾಜೀವ್‌ಗಾಂಧಿ ಹೆಸರನ್ನು ಕೆಡಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಸುಳ್ಳಿನ ಮೊಕದ್ದಮೆ ವಜಾ ಆಗುವ ಮೂಲಕ ಕಡೆಗೂ ಸತ್ಯಕ್ಕೆ ಗೆಲುವು ಸಿಕ್ಕಿದೆ ಎಂದು ಚಂದ್ರಸ್ವಾಮಿ ಸಂತೋಷ ವ್ಯಕ್ತಪಡಿಸಿದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X