Get Updates
Get notified of breaking news, exclusive insights, and must-see stories!

ವೀರಪ್ಪನ್‌ ಸಾವಿನ ನಂತರ ಮುತ್ತುಲಕ್ಷ್ಮಿನಡೆ ಏನು ? ಆಕೆ ಹೇಳುತ್ತಾಳೆ...

ವೀರಪ್ಪನ್‌ ಸಾವಿನ ನಂತರ ಮುತ್ತುಲಕ್ಷ್ಮಿನಡೆ ಏನು ? ಆಕೆ ಹೇಳುತ್ತಾಳೆ...
ವೀರಪ್ಪನ್‌ಪುತ್ರಿಯರ ಕಂಗಳಲ್ಲಿ ಡಾಕ್ಟರ್‌-ಐಎಎಸ್‌ ಅಧಿಕಾರಿಯಾಗುವ ಕನಸು!

ಸೇಲಂ : ದಂತಚೋರ ವೀರಪ್ಪನ್‌ಪತ್ನಿ ಮುತ್ತುಲಕ್ಷ್ಮಿ ಸರಕಾರದ ವಿರುದ್ಧ, ನ್ಯಾಯಾಲಯದಲ್ಲಿ ದಾವೆ ಹೂಡಲು ಉದ್ದೇಶಿಸಿದ್ದಾಳೆ. ನನ್ನ ಗಂಡನ ಸಾವಿಗೆ ಸರಕಾರವೇ ಕಾರಣ. ತಮಿಳುನಾಡು ಎಸ್‌ಟಿಎಫ್‌ ವ್ಯವಸ್ಥಿತವಾಗಿ ಯೋಜನೆ ರೂಪಿಸಿ ನನ್ನ ಗಂಡನನ್ನು ಉದ್ದೇಶಪೂರ್ವಕವಾಗಿ ಕೊಂದಿದೆ ಎನ್ನುವುದು ಮುತ್ತುಲಕ್ಷ್ಮಿ ದೂರು.

ವೀರಪ್ಪನ್‌ ಸಂಗ್ರಹಿಸಿದ್ದ ಎನ್ನಲಾಗುವ ಕೋಟ್ಯಾಂತರ ರೂ.ಗಳನ್ನು ಕಾಡಿನ ಹಳ್ಳ-ಗುಂಡಿಗಳಿಂದ ಹೊರತೆಗೆಯುವ ನೆಪದಲ್ಲಿ ಇಲ್ಲಿನ ಜನರನ್ನು ಶೋಷಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಎಸ್‌ಟಿಎಫ್‌ ನನ್ನನ್ನು ನೆಮ್ಮದಿಯಾಗಿರಲು ಬಿಟ್ಟಿಲ್ಲ . ಅನಗತ್ಯ ಕಿರುಕುಳಗಳ ಮೂಲಕ ಪೊಲೀಸರು ಕುಟುಂಬದ ಶಾಂತಿಕದಡಿದ್ದಾರೆ ಎಂದು ಮುತ್ತುಲಕ್ಷ್ಮಿ ಆರೋಪಿಸಿದ್ದಾಳೆ.

ನನ್ನ ಮಕ್ಕಳಿಬ್ಬರೂ ವಯಸ್ಸಿಗೆ ಬಂದಿದ್ದಾರೆ. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಗಂಡನನ್ನು ಕಳೆದುಕೊಂಡು ನಾನೀಗ ಅನಾಥಳಾಗಿದ್ದೇನೆ. ನನ್ನ ಮಕ್ಕಳಾದ ವಿದ್ಯಾರಾಣಿ(14) ಮತ್ತು ಪ್ರಭಾ(11)ಳ ವಿದ್ಯಾಭ್ಯಾಸಕ್ಕೆ ತಮಿಳುನಾಡು ಸರಕಾರ ನೆರವು ನೀಡಬೇಕು ಎಂದು ಮುತ್ತುಲಕ್ಷ್ಮಿ ಕೋರಿದ್ದಾಳೆ.

ಕನಸು : ಏನೇ ಕಷ್ಟವಾದರೂ ಮಕ್ಕಳ ವಿದ್ಯಾಭ್ಯಾಸ ಅಪೂರ್ಣವಾಗಲು ಬಿಡುವುದಿಲ್ಲ. ಅವರನ್ನು ಶ್ರೇಷ್ಠ ಪೌರರನ್ನಾಗಿಸುವುದು ನನ್ನ ಗುರಿ. ನನ್ನ ಹಿರಿಯ ಮಗಳು ವಿದ್ಯಾಳಿಗೆ ಡಾಕ್ಟರ್‌ ಆಗುವ ಕನಸಿದೆ. ಪ್ರಭಾಳಿಗೆ ಐಎಎಸ್‌ ಅಧಿಕಾರಿಯಾಗುವ ಬಯಕೆ ಇದೆ. ಹೊಟ್ಟೆ ಪಾಡಿಗಾಗಿ ಸಣ್ಣ ಪುಟ್ಟ ವ್ಯಾಪಾರ ಮಾಡಲು ಯೋಚಿಸುತ್ತಿದ್ದೇನೆ. ಧರ್ಮಪುರಿ ಜಿಲ್ಲೆಯಲ್ಲಿ ತನ್ನ ತಾಯಿಯಾಂದಿಗೆ ವಾಸಿಸುತ್ತಿರುವುದಾಗಿ ಮುತ್ತುಲಕ್ಷ್ಮಿ ತಿಳಿಸಿದ್ದಾಳೆ.

(ಏಜನ್ಸೀಸ್‌)

ಮುಖಪುಟ / ವೀರಪ್ಪನ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+