Get Updates
Get notified of breaking news, exclusive insights, and must-see stories!

ಬನ್ನೇರುಘಟ್ಟ, ಸರ್ಜಾಪುರ, ಮಾರತಹಳ್ಳಿರಸ್ತೆಗಳ ಮೋಕ್ಷಕ್ಕೆ 34 ಕೋಟಿ

ಬನ್ನೇರುಘಟ್ಟ, ಸರ್ಜಾಪುರ, ಮಾರತಹಳ್ಳಿರಸ್ತೆಗಳ ಮೋಕ್ಷಕ್ಕೆ 34 ಕೋಟಿ
2005 ನವೆಂಬರ್‌ ಒಳಗೆ ಬೆಂಗಳೂರು ರಸ್ತೆಗಳಿಗೆ ಹೇಮಾಮಾಲಿನಿ ಕೆನ್ನೆಯ ಹೊಳಪು!

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರಕಾರ ಅಸಡ್ಡೆ ಪ್ರದರ್ಶಿಸಿದೆ ಎನ್ನುವ ಆರೋಪಗಳ ಹಿನ್ನೆಲೆ ಸರಕಾರ ಈಗ ನಿದ್ರೆಯಿಂದ ಎದ್ದಿದೆ.

ಮುಖ್ಯಮಂತ್ರಿ ಧರ್ಮಸಿಂಗ್‌ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ , 34 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಮೂರು ರಸ್ತೆಗಳ ಅಭಿವೃದ್ಧಿಗೆ ಸರಕಾರ ಮುಂದಾಗಿದೆ. 50:50 ಅನುಪಾತದಲ್ಲಿ ರಾಜ್ಯಸರಕಾರ ಹಾಗೂ ಐಟಿ ಕಂಪನಿಗಳು ಯೋಜನೆಯ ಹಣವನ್ನು ಭರಿಸಲಿವೆ. ನವೆಂಬರ್‌ 15 ರಿಂದ ಕಾಮಗಾರಿಗಳು ಬಿರುಸಿನ ವೇಗದಲ್ಲಿ ಆರಂಭವಾಗಲಿವೆ.

ಹಾಯ್‌ ಎನ್ನುವ ರಸ್ತೆಗಳು : ಈ ಯೋಜನೆಯಿಂದ ಬನ್ನೇರುಘಟ್ಟ ರಸ್ತೆ, ಸರ್ಜಾಪುರ ರಸ್ತೆ ಹಾಗೂ ಮಾರತಹಳ್ಳಿ ರಸ್ತೆಗಳಿಗೆ ಮೋಕ್ಷ ದೊರಕಲಿದೆ. ರಸ್ತೆಗಳ ಅಭಿವೃದ್ಧಿ ಐಟಿ ಕ್ಷೇತ್ರದ ಪ್ರಗತಿಗೆ ಪೂರಕವಾಗಲಿದೆ. ಅಲ್ಲದೇ ನಗರದ ಎಲ್ಲಾ ರಸ್ತೆಗಳನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಲು ಸರಕಾರ ನಿರ್ಧರಿಸಿದೆ. ನವೆಂಬರ್‌ 2005 ರ ಒಳಗಾಗಿ ನಗರದ ಎಲ್ಲಾ ಪ್ಲೈಓವರ್‌ಗಳು ಮತ್ತು ರಸ್ತೆ ಕಾಮಗಾರಿಗಳ ಮುಗಿಸಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಾಗಿ ಮುಖ್ಯಮಂತ್ರಿ ಧರ್ಮಸಿಂಗ್‌ ಭರವಸೆ ನೀಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+