ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರಾತ್ಮದ ಮಾತಿಗೆ ಮನ್ನಣೆ, ಚುನಾವಣಾ ಸನ್ಯಾಸ-ವೆಂಕಯ್ಯ ನಾಯ್ಡು

By Staff
|
Google Oneindia Kannada News

ಅಂತರಾತ್ಮದ ಮಾತಿಗೆ ಮನ್ನಣೆ, ಚುನಾವಣಾ ಸನ್ಯಾಸ-ವೆಂಕಯ್ಯ ನಾಯ್ಡು
ಪಕ್ಷಕ್ಕೆ ಚೈತನ್ಯ ತುಂಬಲು ಎಲ್‌.ಕೆ.ಆಡ್ವಾಣಿಯಿಂದ ಬಿಜೆಪಿ ಸಾರಥ್ಯ

ನವದೆಹಲಿ: ದಿಢೀರ್‌ ರಾಜಕೀಯ ಬೆಳವಣಿಗೆಯಾಂದರಲ್ಲಿ ಬಿಜೆಪಿಯ ನೂತನ ಅಧ್ಯಕ್ಷರಾಗಿ ಎಲ್‌.ಕೆ.ಆಡ್ವಾಣಿ ಆಯ್ಕೆಯಾಗಿದ್ದಾರೆ. ಆ ಮೂಲಕ ಮಹಾರಾಷ್ಟ್ರ ಚುನಾವಣಾ ವೈಪಲ್ಯಕ್ಕೆ ವೆಂಕಯ್ಯನಾಯ್ಡು ಬಲಿಪಶುವಾಗಿದ್ದಾರೆ.

ಅಕ್ಟೋಬರ್‌ 29 ರಂದು ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಆಡ್ವಾಣಿ ಅಧಿಕಾರ ಸ್ವೀಕರಿಸುವರು. ಲೋಕಸಭೆ ಹಾಗೂ ಮಹಾರಾಷ್ಟ್ರದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನೈತಿಕ ಹೊಣೆಹೊತ್ತು , ಪಕ್ಷದ ಅಧ್ಯಕ್ಷರಾಗಿದ್ದ ಎಂ.ವೆಂಕಯ್ಯ ನಾಯ್ದು ರಾಜೀನಾಮೆ ನೀಡಿದ್ದರು.

ಸನ್ಯಾಸ: ಅಂತರಾತ್ಮದ ಮಾತು ಕೇಳಿ ರಾಜೀನಾಮೆ ನೀಡಿದ್ದೇನೆ. ಜೀವನ ಪರ್ಯಂತ ಯಾವುದೇ ಚುನಾವಣೆಗೆ ನಾನು ಹಾಗೂ ನನ್ನ ಕುಟುಂಬದ ಸದಸ್ಯರು ಸ್ಪರ್ಧಿಸುವುದಿಲ್ಲ. ವೈಯುಕ್ತಿಕ ಸಮಸ್ಯೆ ಹಾಗೂ ಪತ್ನಿಯ ಅನಾರೋಗ್ಯ ಸಹಾ ರಾಜೀನಾಮೆಗೆ ಕಾರಣವಾಗಿದೆ ಎಂದು ವೆಂಕಯ್ಯನಾಯ್ಡು ಪ್ರತಿಕ್ರಿಯಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X