Get Updates
Get notified of breaking news, exclusive insights, and must-see stories!

ದೇವದುರ್ಗ ತಾಲ್ಲೂಕಲ್ಲಿ ನಾಲಗೆ ಚಪ್ಪರಿಸಿದ ಮಲೇರಿಯಾಗೆ 15 ಬಲಿ

ದೇವದುರ್ಗ ತಾಲ್ಲೂಕಲ್ಲಿ ನಾಲಗೆ ಚಪ್ಪರಿಸಿದ ಮಲೇರಿಯಾಗೆ 15 ಬಲಿ
ಕಳೆದ ಮೂರು ವರ್ಷಗಳಿಂದ ಸಾವಿನ ಸಂಖ್ಯೆ ಹೆಚ್ಚಳ, ಸರಕಾರಕ್ಕಿಲ್ಲ ಕಳವಳ!

ರಾಯಚೂರು : ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಆರೋಗ್ಯ ಎಂಬ ಸರಕಾರದ ನೀತಿ ಘೋಷಣೆಗಳಾಗಿಯೇ ಉಳಿದಿವೆ. ಗ್ರಾಮೀಣ ಪ್ರದೇಶಗಳತ್ತ ಸರಕಾರದ ಅಸಡ್ಡೆ ಎಷ್ಟಿದೆ ಎನ್ನುವುದಕ್ಕೆ ದೇವದುರ್ಗ ತಾಲೂಕು ಜೀವಂತ ನಿದರ್ಶನ. ಮಲೇರಿಯಾ ಮಾರಿ ಪ್ರತಿವರ್ಷ ಇಲ್ಲಿ ತನ್ನ ನಾಲಿಗೆಯನ್ನು ಒದ್ದೆ ಮಾಡಿಕೊಳ್ಳುತ್ತಿದ್ದಾಳೆ. ರೋಗ ನಿಯಂತ್ರಿಸಿ ಜನರನ್ನು ಉಳಿಸುವತ್ತ ಆಡಳಿತ ಯಂತ್ರ ಗಮನಹರಿಸಿಲ್ಲ.

ದೇವದುರ್ಗ ತಾಲೂಕಿನಲ್ಲಿ ಮಲೇರಿಯಾ ತೀವ್ರತೆಯಿಂದ ಈಗಾಗಲೇ ಹದಿನೈದು ಮಂದಿ ಸಾವನ್ನಪ್ಪಿದ್ದಾರೆ. ತಾಲೂಕಿನ ಗಳಗ, ದೇವರಗುಡ್ಡ, ಸೇರಿದಂತೆ 60 ಹಳ್ಳಿಗಳಲ್ಲಿ ಮಲೇರಿಯಾ ಪಸರಿಸಿದೆ. ಕಳೆದ ಮೂರು ವರ್ಷಗಳಿಂದ ಮಲೇರಿಯಾದಿಂದ ತಾಲೂಕು ನಲುಗುತ್ತಿದೆ.

ರೋಗಕ್ಕೆ ತುತ್ತಾಗಿ 2002 ರಲ್ಲಿ ಹತ್ತು ಮಂದಿ, 2003 ರಲ್ಲಿ ಎಂಟು ಮಂದಿ ಮಲೇರಿಯಾಕ್ಕೆ ಬಲಿಯಾಗಿದ್ದಾರೆ. 2004 ರಲ್ಲಿ ಈಗಾಗಲೇ ಹದಿನೈದು ಮಂದಿ ಸಾವನ್ನಪ್ಪಿದ್ದಾರೆ. ಇಷ್ಟಾದರೂ ಸರಕಾರದ ಹಿರಿಯ ಅಧಿಕಾರಿಗಳು ಇತ್ತ ಕಣ್ಣೆತ್ತಿ ಸಹಾ ನೋಡಿಲ್ಲ. 2809 ರೋಗಿಗಳ ರಕ್ತ ಪರೀಕ್ಷೆ ನಡೆಸಲಾಗಿದ್ದು, 850 ಮಂದಿಗೆ ಮಲೇರಿಯಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌, ಈ ಭಾಗದತ್ತ ವೈದ್ಯರನ್ನು ಕಳುಹಿಸಿ, ರೋಗದ ಹತೋಟಿಗೆ ಕ್ರಮತೆಗೆದು ಕೊಳ್ಳುವುದಾಗಿ ತಿಳಿಸಿದ್ದಾರೆ.

ದೇವದುರ್ಗದಲ್ಲಿ ಇಪ್ಪತ್ತು ಹಾಸಿಗೆಗಳ ಅಸ್ಪತ್ರೆ ಆರಂಭಿಸುವ ಭರವಸೆ ನೀಡಿದ್ದ ಸರಕಾರ ಇತ್ತ ತಿರುಗಿ ಸಹಾ ನೋಡಿಲ್ಲ. ಇಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ರಾಯಚೂರು ಜಿಲ್ಲಾ ಅಸ್ಪತ್ರೆಗೆ ಹೋದರೆ ಅಲ್ಲಿ ಸ್ತ್ರೀರೋಗ ಮತ್ತು ಮಕ್ಕಳ ತಜ್ಞರಿಲ್ಲ. ಗ್ರಾಮೀಣ ಜನರ ಆರೋಗ್ಯಕಾಯುವಲ್ಲಿ ಸರಕಾರ ವಿಫಲವಾಗಿದೆ ಎನ್ನುವುದು ಈ ಭಾಗದ ಶಾಸಕ ಹನುಮಂತಪ್ಪ ವೈ.ಆಲ್ಕೋಡ್‌ ಅವರ ದೂರು.

(ಏಜನ್ಸೀಸ್‌)

ಮುಖಪುಟ / ವಾಟ್ಸ್‌ ಹಾಟ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+