ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಂಚಯ’ದಿಂದ ಕವನ-ಲೇಖನ ಸ್ಪರ್ಧೆ

By Staff
|
Google Oneindia Kannada News

‘ಸಂಚಯ’ದಿಂದ ಕವನ-ಲೇಖನ ಸ್ಪರ್ಧೆ
ಬಹುಮಾನಿತ ಕೃತಿಗಳು ಪುಸ್ತಕರೂಪದಲ್ಲಿ ಪ್ರಕಟ

ಬೆಂಗಳೂರು : ‘ಸಂಚಯ’ ಸಾಂಸ್ಕೃತಿಕ ಪತ್ರಿಕೆಯು ಕನ್ನಡದ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕಾವ್ಯ ಮತ್ತು ಲೇಖನ ಸ್ಪರ್ಧೆಗಳನ್ನು ನಡೆಸುತ್ತಿದೆ.

ಕಾವ್ಯ ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ವರಚನೆಯ ಎರಡು ಕವಿತೆಗಳನ್ನು ಕಳುಹಿಸಬೇಕು. ಅನುವಾದ ಹಾಗೂ ಈಗಾಗಲೇ ಪ್ರಕಟಗೊಂಡ ಕವಿತೆಗಳಿಗೆ ಅವಕಾಶವಿಲ್ಲ.

ಲೇಖನ ಸ್ಪರ್ಧೆಯಲ್ಲಿ ಭಾಗವಹಿಸುವವರು ಕೆಳಗಿನ ಯಾವುದಾದರೊಂದು ವಿಷಯದ ಕುರಿತು ಲೇಖನ ಬರೆಯಬಹುದು. ವಿಷಯಗಳು : ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತು : ಅದರ ಪ್ರಸ್ತುತತೆ, ಜಯಂತ ಕಾಯ್ಕಿಣಿಯವರ ಸಣ್ಣಕತೆಯಾಂದರೆ ವಿಶ್ಲೇಷಣೆ ಅಥವಾ ಕಂಪ್ಯೂಟರಿನಲ್ಲಿ ಕನ್ನಡ ಬಳಕೆ : ಸಮಸ್ಯೆ - ಸವಾಲು. ಇವುಗಳಲ್ಲಿ ಒಂದು ವಿಷಯದ ಕುರಿತು, 15 ಪುಟ ಮೀರದಂತೆ ಲೇಖನ ಬರೆದು ಕಳುಹಿಸಬೇಕು.

ಬರಹಗಳನ್ನು ಕಳುಹಿಸಲು ಕೊನೆ ದಿನ ಅ.30, 2004.

ವಿಳಾಸ : ಸಂಚಯ , ನಂ. 86, 8ನೇ ಅಡ್ಡರಸ್ತೆ, ಅಶೋಕನಗರ, ಬನಶಂಕರಿ 1 ನೇ ಹಂತ, ಬೆಂಗಳೂರು-50. ದೂರವಾಣಿ- 080-26614510. ಮೊಬೈಲ್‌- 9844063514.

ಬಹುಮಾನಿತ ಬರಹಗಳನ್ನು ಸಂಚಯ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಜನವರಿ 31, 2005ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X