‘ಸಂಚಯ’ದಿಂದ ಕವನ-ಲೇಖನ ಸ್ಪರ್ಧೆ
‘ಸಂಚಯ’ದಿಂದ
ಕವನ-ಲೇಖನ
ಸ್ಪರ್ಧೆ
ಬಹುಮಾನಿತ
ಕೃತಿಗಳು
ಪುಸ್ತಕರೂಪದಲ್ಲಿ
ಪ್ರಕಟ
ಕಾವ್ಯ ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ವರಚನೆಯ ಎರಡು ಕವಿತೆಗಳನ್ನು ಕಳುಹಿಸಬೇಕು. ಅನುವಾದ ಹಾಗೂ ಈಗಾಗಲೇ ಪ್ರಕಟಗೊಂಡ ಕವಿತೆಗಳಿಗೆ ಅವಕಾಶವಿಲ್ಲ.
ಲೇಖನ ಸ್ಪರ್ಧೆಯಲ್ಲಿ ಭಾಗವಹಿಸುವವರು ಕೆಳಗಿನ ಯಾವುದಾದರೊಂದು ವಿಷಯದ ಕುರಿತು ಲೇಖನ ಬರೆಯಬಹುದು. ವಿಷಯಗಳು : ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತು : ಅದರ ಪ್ರಸ್ತುತತೆ, ಜಯಂತ ಕಾಯ್ಕಿಣಿಯವರ ಸಣ್ಣಕತೆಯಾಂದರೆ ವಿಶ್ಲೇಷಣೆ ಅಥವಾ ಕಂಪ್ಯೂಟರಿನಲ್ಲಿ ಕನ್ನಡ ಬಳಕೆ : ಸಮಸ್ಯೆ - ಸವಾಲು. ಇವುಗಳಲ್ಲಿ ಒಂದು ವಿಷಯದ ಕುರಿತು, 15 ಪುಟ ಮೀರದಂತೆ ಲೇಖನ ಬರೆದು ಕಳುಹಿಸಬೇಕು.
ಬರಹಗಳನ್ನು ಕಳುಹಿಸಲು ಕೊನೆ ದಿನ ಅ.30, 2004.
ವಿಳಾಸ : ಸಂಚಯ , ನಂ. 86, 8ನೇ ಅಡ್ಡರಸ್ತೆ, ಅಶೋಕನಗರ, ಬನಶಂಕರಿ 1 ನೇ ಹಂತ, ಬೆಂಗಳೂರು-50. ದೂರವಾಣಿ- 080-26614510. ಮೊಬೈಲ್- 9844063514.
ಬಹುಮಾನಿತ ಬರಹಗಳನ್ನು ಸಂಚಯ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಜನವರಿ 31, 2005ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್