Get Updates
Get notified of breaking news, exclusive insights, and must-see stories!

ರಾಯಚೂರು ಜಿಲ್ಲೆಯ ಗಲಗ ಗ್ರಾಮದಲ್ಲಿ ಮಲೇರಿಯಾಕ್ಕೆ 9ಜನ ಬಲಿ

ರಾಯಚೂರು ಜಿಲ್ಲೆಯ ಗಲಗ ಗ್ರಾಮದಲ್ಲಿ ಮಲೇರಿಯಾಕ್ಕೆ 9ಜನ ಬಲಿ
ಗ್ರಾಮವನ್ನು ಸುತ್ತುವರಿದಿರುವ ನಾರಾಯಣಪುರ ಜಲಾಶಯದ ನೀರಿನಿಂದ ಸೊಳ್ಳೆ ಸಂತತಿ ವೃದ್ಧಿ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದಲ್ಲಿ ಮಲೇರಿಯಾದಿಂದ 9 ಮಂದಿ ಸಾವಿಗೀಡಾಗಿದ್ದಾರೆ.

ಅಂಜಿನಮ್ಮ ಚೆನ್ನಯ್ಯ, ಮಲ್ಲಮ್ಮ ನಾಗಪ್ಪ, ನಾಗರತ್ನಮ್ಮ ದುರ್ಗಪ್ಪ, ಕಾಸಿಂ ಆಲಿ ರೆಹಮಾನ್‌ಸಾಬ್‌, ಚೆನ್ನಮ್ಮ ಸುಗಪ್ಪ, ಲಾಲ್‌ಸಾಬ್‌ ಮೆಹಬೂಬ್‌ಸಾಬ್‌, ಮುದುಕಪ್ಪ ಹನುಮಯ್ಯ, ಹನುಮಂತಿ ಹನುಮಯ್ಯ ಹಾಗೂ ಹನುಮಂತಿ ಹನುಮಂತ್‌ ಎಂದು ಮಲೇರಿಯಾಕ್ಕೆ ಬಲಿಯಾದವರನ್ನು ಗುರ್ತಿಸಲಾಗಿದೆ.

ಈಚಿನ ದಿನಗಳಲ್ಲಿ ದೇವದುರ್ಗ ತಾಲ್ಲೂಕಿನಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಗೆ ತಲೆಬಿಸಿ ಉಂಟು ಮಾಡಿದೆ. ಮೊಬೈಲ್‌ ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆ ರೂಪಿಸಿದ್ದು , ಮಲೇರಿಯಾ ತಡೆಗೆ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ.

ಗಲಗ ಗ್ರಾಮವನ್ನು ನಾರಾಯಣಪುರ ಜಲಾಶಯದ ಬಲದಂಡೆಯ ನೀರು ಸುತ್ತುವರಿದಿದ್ದು ಸೊಳ್ಳೆಗಳ ಸಂತಾನ ಅಕ್ಷಯವಾಗಲು ಕಾರಣವಾಗಿದೆ. ಸೊಳ್ಳೆಗಳ ನಿಯಂತ್ರಣ, ರಕ್ತ ಪರೀಕ್ಷೆ , ಔಷಧಿ ಪೂರೈಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+