ಸುರತ್ಕಲ್ನಲ್ಲಿ ಅ.2-3ರಂದು ‘ಸ್ಪಿಕ್ಮೆಕೆ’ಯ ದಕ್ಷಿಣವಲಯ ಸಮ್ಮೇಳನ
ಸುರತ್ಕಲ್ನಲ್ಲಿ
ಅ.2-3ರಂದು
‘ಸ್ಪಿಕ್ಮೆಕೆ’ಯ
ದಕ್ಷಿಣವಲಯ
ಸಮ್ಮೇಳನ
ಸಮ್ಮೇಳನದಲ್ಲಿ
ಜಾನಪದ
ಕಲಾವಿದರಿಂದ
ವಿಶೇಷ
ಪ್ರದರ್ಶನಗಳು
ದಕ್ಷಿಣಕನ್ನಡದ ಸುರತ್ಕಲ್ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಅ.2ರಿಂದ 2 ದಿನಗಳ ಕಾಲ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ವಿವಿಧ ಕಾರ್ಯಾಗಾರಗಳು, ಉಪನ್ಯಾಸಗಳು, ಪ್ರದರ್ಶನಗಳು ಹಾಗೂ ಜನಪದ ಕಲಾವಿದರ ಪ್ರತಿಭಾ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ ಎಂದು ಸ್ಪಿಕ್ಮೆಕೆ ಸ್ಥಾಪಕ ಅಧ್ಯಕ್ಷ ಕಿರಣ್ ಸೇಥ್ ತಿಳಿಸಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿನ ಸ್ಪಿಕ್ಮೆಕೆಯ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸುವರೆಂದು ನಿರೀಕ್ಷಿಸಲಾಗಿದೆ. ಈ ಸಮ್ಮೇಳನ ಸ್ಪಿಕ್ಮೆಕೆಯ ಮುಂದಿನ ಚಟುವಟಿಕೆಗಳಿಗೆ ಇಂಬು ನೀಡಲಿದೆ ಎಂದು ಕಿರಣ್ ಸೇಥ್ ಹೇಳಿದರು.
ಸೆಪ್ಟಂಬರ್ ಮೊದಲ ವಾರದಲ್ಲಿ ಕೆಲವು ಸ್ವಯಂಸೇವಕರೊಂದಿಗೆ ಪಾಕಿಸ್ತಾನಕ್ಕೆ ಭೇಟಿಕೊಟ್ಟ ಅನುಭವವನ್ನು ಸ್ಮರಿಸಿಕೊಂಡ ಸೇಥ್- ಅದೊಂದು ಅವಿಸ್ಮರಣೀಯ ಪ್ರವಾಸ ಎಂದರು. ಸ್ಪಿಕ್ಮೆಕೆಯ 60ನೇ ವಾರ್ಷಿಕೋತ್ಸವದ ಪ್ರಯುಕ್ತ ಈ ಪ್ರವಾಸ ಏರ್ಪಡಿಸಲಾಗಿತ್ತು . ಭಾರತ-ಪಾಕಿಸ್ತಾನ ಜನತೆಯ ಶಾಂತಿ ಅಭಿವೃದ್ಧಿ ಸಮಿತಿಯ ಸದಸ್ಯರೂ ಈ ಪ್ರವಾಸದಲ್ಲಿ ಭಾಗವಹಿಸಿದ್ದರು ಎಂದು ಸೇಥ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು