Get Updates
Get notified of breaking news, exclusive insights, and must-see stories!

ಲಿಂಗಸೂಗೂರಿನ ಸತ್ತ ವ್ಯಕ್ತಿಗೆ ಕಾಂಗ್ರೆಸ್‌ ಪಕ್ಷದಿಂದ ಅಮಾನತು ಆದೇಶ

ಲಿಂಗಸೂಗೂರಿನ ಸತ್ತ ವ್ಯಕ್ತಿಗೆ ಕಾಂಗ್ರೆಸ್‌ ಪಕ್ಷದಿಂದ ಅಮಾನತು ಆದೇಶ
ನಾಯಕರ ಕುರಿತೇ ಈ ರೀತಿಯ ಅವಜ್ಞೆಯಾದರೆ ಜನಸಾಮಾನ್ಯರ ಪಾಡೇನು ಪೂಜಾರಿ-ಧರ್ಮಸಿಂಗ್‌?

ರಾಯಚೂರು : ಸತ್ತವರ ಹೆಸರಿನಲ್ಲಿ ತುಂಬಾ ದಿನಗಳವರೆಗೆ ಪಿಂಚಣಿ ಬರುವುದನ್ನು , ಅಂಚೆ ಬರುವುದನ್ನು ನೋಡಿದ್ದೀರಿ. ಮತದಾರರ ಪಟ್ಟಿಯಲ್ಲಿ ಹಾಗೂ ಸರ್ಕಾರಿ ದಾಖಲೆಗಳಲ್ಲಿ ಸತ್ತವರು ತುಂಬಾ ದಿನಗಳವರೆಗೆ ಜೀವಂತವಾಗಿರುವುದಿದೆ. ದಾಖಲೆಗಳಲ್ಲಿ ಬದುಕಿರುವವರು ಸಾಯುವುದೂ ಉಂಟು. ಆದರೆ ಸತ್ತ ವ್ಯಕ್ತಿಯನ್ನು ಉಚ್ಛಾಟಿಸುವ ಪ್ರಕ್ರಿಯೆ ಪ್ರಮುಖ ರಾಜಕೀಯ ಪಕ್ಷವೊಂದರಲ್ಲಿ ನಡೆದದ್ದನ್ನು ಕಂಡು-ಕೇಳಿದ್ದೀರಾ ? ಆ ಸಾಧನೆ ಕಾಂಗ್ರೆಸ್‌ ಪಕ್ಷದ್ದು !

ಲಿಂಗಸೂಗೂರು ಬ್ಲಾಕ್‌ ಕಾಂಗ್ರೆಸ್‌ ಧ್ಯಕ್ಷ ಶ್ಯಾಮಸುಂದರ ರೆಡ್ಡಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವ ಆದೇಶವನ್ನು ಕೆಪಿಸಿಸಿ ಇತ್ತೀಚೆಗೆ ಹೊರಡಿಸಿದೆ. ವಿಪರ್ಯಾಸವೆಂದರೆ, ಶ್ಯಾಮಸುಂದರ ರೆಡ್ಡಿ ಕಳೆದ ಏಪ್ರಿಲ್‌ನಲ್ಲಿಯೇ ವಿಧಿವಶರಾಗಿದ್ದರು. ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಯ ದಿನವೇ ಅವರ ಸಾವು ಸಂಭವಿಸಿತ್ತು .

ರೆಡ್ಡಿಯವರ ನಿಧನದ ವಾರ್ತೆ ಕೆಪಿಸಿಸಿ ಕಚೇರಿ ತಲುಪಲಿಲ್ಲವೇ ? ಇಲ್ಲ ಎನ್ನುವುದು ಹೇಗೆ? ರೆಡ್ಡಿಯವರ ನಿಧನದ ವಾರ್ತೆ ಪತ್ರಿಕೆಗಳಲ್ಲಿ ಸುದ್ದಿಯಾಗಿದೆ. ಟೀವಿ ವಾಹಿನಿಗಳಲ್ಲಿ ಸುದ್ದಿಯಾಗಿದೆ. ಜಿಲ್ಲಾ ಮತ್ತು ರಾಜ್ಯ ಕಾಂಗ್ರೆಸ್‌ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಹೀಗಿದ್ದೂ ಇದೆಂಥ ಅಭಾಸ !

ಸದಸ್ಯತ್ವ ನೋಂದಣಿ ವಿಷಯಕ್ಕೆ ಸಂಬಂಧಿಸಿದಂತೆ ರೆಡ್ಡಿ ಅವರನ್ನು ಅಮಾನತುಗೊಳಿಸಿರುವುದಾಗಿ ಪ್ರಸ್ತುತ ಕೆಪಿಸಿಸಿ ಆದೇಶ ಹೊರಡಿಸಿದೆ. ಕೆಪಿಸಿಸಿ ಆದೇಶದ ಬಗ್ಗೆ ಸ್ಥಳೀಯ ಕಾಂಗ್ರೆಸ್ಸಿಗರು ಭಾರೀ ಬೇಸರ ವ್ಯಕ್ತಪಡಿಸಿದ್ದಾರೆ. ನಾಯಕರ ಕುರಿತೇ ಪಕ್ಷ ಈ ರೀತಿಯ ಅವಜ್ಞೆ ತೋರುವಾಗ ಇನ್ನು ಸಾಮಾನ್ಯರ ಪಾಡೇನು ಎನ್ನುವುದು ಸ್ಥಳೀಯರ ಪ್ರಶ್ನೆ ?

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+