ಅವರು ಪ್ರಗತಿಪರರು, ಸಂಪ್ರದಾಯವಾದಿ : ಶ್ರೀರಂಗರಿಗೆ ಶತ ನಮನ
ಅವರು ಪ್ರಗತಿಪರರು, ಸಂಪ್ರದಾಯವಾದಿ : ಶ್ರೀರಂಗರಿಗೆ ಶತ ನಮನ
ಶ್ರೀರಂಗರ ಜನ್ಮಶತಮಾನೋತ್ಸವ ಅಂಗವಾಗಿ ಬೆಂಗಳೂರಿನಲ್ಲಿ ವಿಚಾರ ಸಂಕಿರಣ
ನಗರದ ಸೆನೆಟ್ ಹಾಲ್ನಲ್ಲಿ ‘ಶ್ರೀರಂಗ’ ರ ಜನ್ಮ ಶತಮಾನೋತ್ಸವದ ಪ್ರಯುಕ್ತ ಕೇಂದ್ರ ಸಾಹಿತ್ಯ ಅಕಾಡೆಮಿ ಏರ್ಪಡಿ ಸಿದ್ದ ಶ್ರೀರಂಗರ ಬರಹಗಳ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.
ಬೆಂಗಳೂರು, ಧಾರವಾಡ ಮತ್ತಿತರ ಕಡೆ ರಂಗಚಳವಳಿಗೆ ಶ್ರೀರಂಗ ಕಾರಣಕರ್ತರಾಗಿದ್ದಾರೆ. ಅಲ್ಲದೇ ರಂಗಭೂಮಿ ಯಲ್ಲಿ ತಮ್ಮದೇ ಆದ ವಿಶಿಷ್ಟ ಪ್ರಯೋಗಗಳಿಂದ ಅವರು ಹೆಸರಾಗಿದ್ದರು ಎಂದ ಕಂಬಾರರು-ಶ್ರೀರಂಗರ ಎಲ್ಲಾ ನಾಟಕಗಳನ್ನು ಪ್ರಕಟಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ವಿಚಾರ ಸಂಕಿರಣ ಉದ್ಘಾಟಿಸಿದ ರಂಗ ನಿರ್ದೇಶಕಿ ವಿಜಯ ಮೆಹ್ತಾ ಮಾತನಾಡಿ, ಬಂಡಾಯಗಾರರು ಎಲ್ಲ ಸಂಬಂ ಧಗಳನ್ನು ಧಿಕ್ಕರಿಸಿ ನಿಲ್ಲುತ್ತಾರೆ. ಆದರೆ ಶ್ರೀರಂಗ ಕಡೆಯವರೆಗೆ ಸಂಬಂಧಗಳನ್ನು ಉಳಿಸಿಕೊಂಡಿದ್ದರು. ಲಂಡನ್ನಲ್ಲಿ ಶಿಕ್ಷಣ ಪಡೆದ ಶ್ರೀರಂಗರಲ್ಲಿ ಒಬ್ಬ ಸಂಪ್ರದಾಯವಾದಿ ಮತ್ತು ಒಬ್ಬ ಪ್ರಗತಿವಾದಿ ವ್ಯಕ್ತಿತ್ವವಿತ್ತು. ಹೀಗಾಗಿಯೇ ಅವರ ನಾಟಕಗಳು ಪರಿಣಾಮಕಾರಿಯಾಗಿವೆ ಎಂದರು.
ಹಿರಿಯ ವಿಮರ್ಶಕ ಡಾ. ಜಿ.ಎಸ್.ಆಮೂರ ಮಾತನಾಡಿ, ಸ್ವಾತಂತ್ರ್ಯಪೂರ್ವದಲ್ಲಿದ್ದ ಆರ್.ವಿ. ಜಾಗೀರದಾರ್ ಅನಂತರ ಆದ್ಯರಂಗಚಾರ್ಯ ಆದರು. ಸಂಸ್ಕೃ ತ ಮನೆತನದವರಾದರೂ, ಸಂಪ್ರದಾಯವಿರೋಧಿ. ಕನ್ನಡ ರಂಗ ಭೂಮಿಯಲ್ಲಿ ಆಧುನಿಕತೆಯ ತರ್ಕ ಮತ್ತು ಪ್ರಗತಿಯ ಚಿಂತನೆಗೆ ಶ್ರೀರಂಗ ಅಡಿಗಲ್ಲು ಹಾಕಿದರು. 1930 ರಿಂದ 1960 ಶ್ರೀರಂಗರಯುಗ ಎನ್ನಬಹುದು ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ. ಸಚ್ಚಿದಾನಂದನ್, ಅಗ್ರಹಾರ ಕೃ ಷ್ಣಮೂರ್ತಿ, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications