Get Updates
Get notified of breaking news, exclusive insights, and must-see stories!

ಕುವೆಂಪು ಮರೆತ ಕುರ್ಚಿ ರಾಜಕಾರಣದ ಧರ್ಮ ಸರ್ಕಾರ -ದೇಜಗೌ

ಕುವೆಂಪು ಮರೆತ ಕುರ್ಚಿ ರಾಜಕಾರಣದ ಧರ್ಮ ಸರ್ಕಾರ -ದೇಜಗೌ
ಗಾಂಧೀಜಿ ಏರಿದ ಎತ್ತರಕ್ಕೆ ಮುಟ್ಟಿದ ಕುವೆಂಪು

ಬೆಂಗಳೂರು : ಕುರ್ಚಿ ಉಳಿಸಿಕೊಳ್ಳುವುದರಲ್ಲಿ ಬಿಡುವು ಕಳೆದುಕೊಂಡಿರುವ ಧರ್ಮಸಿಂಗ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ರಾಷ್ಟ್ರಕವಿ ಕುವೆಂಪು ಶತಮಾನೋತ್ಸವವನ್ನು ಮರೆತುಬಿಟ್ಟಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ದೇ.ಜವರೇಗೌಡ ಟೀಕಿಸಿದ್ದಾರೆ.

ರಾಜಕೀಯ ಜಂಜಾಟದ ನಡುವೆ ಸರ್ಕಾರ ಕುವೆಂಪು ಅವರನ್ನು ಮರೆತಿದೆ. ಕುವೆಂಪು ಶತಮಾನೋತ್ಸವ ಕಾರ್ಯಕ್ರಮಗಳು ನೆನೆಗುದಿಗೆ ಬಿದ್ದಿವೆ. ಕುವೆಂಪು ಸಾಹಿತ್ಯದ ಪ್ರಚಾರ ಹಾಗೂ ಅಧ್ಯಯನ ಸಂಸ್ಥೆ ಸ್ಥಾಪನೆಗೆ ಸರ್ಕಾರ ಪ್ರಯತ್ನ ನಡೆಸುತ್ತಿಲ್ಲ ಎಂದು ದೇಜಗೌ ದೂರಿದರು. ಮೈಸೂರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವೊಂದರ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಹಿಂದಿನ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಆಡಳಿತಾವಧಿಯಲ್ಲಿ ಪ್ರಾರಂಭವಾದ ಕುವೆಂಪು ಶತಮಾನೋತ್ಸವ ಕಾರ್ಯಕ್ರಮಗಳನ್ನು ಧರಂ ಸರ್ಕಾರ ಮುಂದುವರಿಸಬೇಕು ಎಂದು ದೇಜಗೌ ಆಗ್ರಹಿಸಿದರು.

ಕುವೆಂಪು ಸಾಹಿತ್ಯದಲ್ಲಿ ಸಮಸ್ತ ವಿಶ್ವದ ಪರಿಕಲ್ಪನೆಯಿದ್ದು , ಅವರನ್ನು ಗಾಂಧೀಜಿಯ ಎತ್ತರಕ್ಕೆ ಹೋಲಿಸಿದರೆ ತಪ್ಪಾಗಲಾರದು ಎಂದು ದೇಜಗೌ ಅಭಿಪ್ರಾಯಪಟ್ಟರು.

ಗಾಂಧೀಜಿಗೆ ಜಾತಿವಾದಿ ಪಟ್ಟ ಕಟ್ಟುವ ಕೆಲವರು ಯತ್ನಿಸುತ್ತಿದ್ದಾರೆ. ಆದರೆ ಅಂಬೇಡ್ಕರ್‌ಗಿಂತ ಮುಂಚೆಯೇ ಅಸ್ಪೃಶ್ಯತೆಯನ್ನು ತೊಡೆದುಹಾಕಲು ಗಾಂಧೀಜಿ ಪ್ರಯತ್ನಿಸಿದ್ದರು ಎಂದು ದೇಜಗೌ ಹೇಳಿದರು.

(ಇನ್ಫೋ ವಾರ್ತೆ)

ಗಾಂಧೀಜಿ ಜೊತೆ ಕುವೆಂಪು ಹೋಲಿಕೆ ಸರಿಯಾ ?

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+