ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರಕಾರಕ್ಕೆ ಸಕ್ಕರೆ ಕಾರ್ಖಾನೆಗಳ ಬಗೆಗೆ ಉಕ್ಕಿ ಬಂದಿಹುದು ಅಕ್ಕರೆ

By Staff
|
Google Oneindia Kannada News

ರಾಜ್ಯ ಸರಕಾರಕ್ಕೆ ಸಕ್ಕರೆ ಕಾರ್ಖಾನೆಗಳ ಬಗೆಗೆ ಉಕ್ಕಿ ಬಂದಿಹುದು ಅಕ್ಕರೆ
ಸಹಕಾರಿ ಸಕ್ಕರೆ ಕೈಗಾರಿಕೆಗಳಿಗೆ ಕಬ್ಬು ಅರೆಯಲು 28 ಕೋಟಿ ರೂ. ನೆರವು

ಬೆಂಗಳೂರು : ಸಹಕಾರಿ ಸಕ್ಕರೆ ಕೈಗಾರಿಕೆಗಳಿಗೆ ಕಬ್ಬು ಅರೆಯಲು ಪೂರ್ವಭಾವಿ ವೆಚ್ಚಕ್ಕಾಗಿ ರಾಜ್ಯಸರಕಾರ 28 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಒಪ್ಪಿದೆ ಎಂದು ಕೈಗಾರಿಕಾ ಸಚಿವ ಪಿ.ಜಿ.ಆರ್‌. ಸಿಂಧ್ಯಾ ತಿಳಿಸಿದ್ದಾರೆ.

ಸಹಕಾರಿ ಸಕ್ಕರೆ ಕೈಗಾರಿಕೆಗಳ ಮಾಲೀಕರು ಹಾಗೂ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೂ ಸಮವಾಗಿ ಹಣವನ್ನು ವಿತರಿಸಲಾಗುವುದು. ಅಕ್ಟೋಬರ್‌ 15 ರಿಂದ ಕಬ್ಬು ಅರೆಯುವ ಪ್ರಕ್ರಿಯೆಗಳನ್ನು ಕಾರ್ಖಾನೆಗಳು ಆರಂಭಿಸಲಿವೆ ಎಂದು ತಿಳಿಸಿದ್ದಾರೆ.

ಬೆಳಗಾವಿಯ ಮಾರ್ಕಾಂಡೇಯ, ಸೋಮೇಶ್ವರ, ಧನಲಕ್ಷ್ಮಿ, ಸಕ್ಕರೆ ಕಾರ್ಖಾನೆಗಳಿಗೆ ಹಾಗೂ ಬೀದರ್‌ನ ನಾರಂಜ ಸಕ್ಕರೆ ಕಾರ್ಖಾನೆಗೆ ಪುನಶ್ಟೇತನ ನೀಡಲು ಉದ್ದೇಶಿಸಲಾಗಿದೆ. ರಾಜ್ಯ ಸರಕಾರವು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ 45 ಕೋಟಿ ರೂ. ಸಾಲ ನೀಡುವಂತೆ ಪ್ರಸ್ತಾವನ ೆ ಸಲ್ಲಿಸಿದೆ. ಶೀಘ್ರದಲ್ಲಿ ಯೇ ಸಾಲ ಮಂಜೂರು ಮಾಡುವ ಸಾಧ್ಯತೆಗಳಿದ್ದು ಹೆಚ್ಚುವರಿಯಾಗಿ ಆರು ಸಕ್ಕರೆ ಕೈಗಾರಿಕೆಗಳಿಗೆ ಸಹಾ ಸಾಲ ಲಭ್ಯವಾಗಲಿದೆ ಎಂದರು.

ಹೊರರಾಜ್ಯಗಳಿಂದ ಕಬ್ಬನ್ನು ಸಂಗ್ರಹಿಸಲು ಕೆಲವು ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ನೀಡಲಾಗಿದೆ. ಉಳಿದ ಕಾರ್ಖಾನೆಗಳು ಹೀಗೆಯೇ ಮಾಡಿದರೆ ಸರಕಾರ ಸೂಕ್ತ ಕ್ರಮ ಜರುಗಿಸಲಿದೆ ಎಂದು ಸಿಂಧ್ಯಾ ಎಚ್ಚರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X