ಸಿಇಟಿ ಬಿಕ್ಕಟ್ಟು ಜೀವಂತ ! ಪ್ರವೇಶಕ್ಕೆ ಐದು ವೈದ್ಯ ಕಾಲೇಜು ಅಡ್ಡಗಾಲು
ಸಿಇಟಿ
ಬಿಕ್ಕಟ್ಟು
ಜೀವಂತ
!
ಪ್ರವೇಶಕ್ಕೆ
ಐದು
ವೈದ್ಯ
ಕಾಲೇಜು
ಅಡ್ಡಗಾಲು
ಹೈಕೋರ್ಟ್ನಲ್ಲಿನ
ದಾವೆ
ಇತ್ಯರ್ಥವಾಗುವವರೆಗೆ
ಸಿಇಟಿ
ವಿದ್ಯಾರ್ಥಿಗಳಿಗೆ
ಪ್ರವೇಶವಿಲ್ಲ
ಮೈಸೂರಿನ ಜೆಎಸ್ಎಸ್ ವೈದ್ಯಕಾಲೇಜು, ಬೆಂಗಳೂರಿನ ಎಂ.ಎಸ್.ರಾಮಯ್ಯ ಹಾಗೂ ಕಿಮ್ಸ್ ಕಾಲೇಜು, ಕೋಲಾರದ ದೇವರಾಜ ಅರಸು, ಬಿಜಾಪುರದ ಬಿಎಲ್ಡಿ ಕಾಲೇಜುಗಳು ಸಿಇಟಿ ಶುಲ್ಕ ಪದ್ಧತಿಗೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿನ ದಾವೆ ಮುಗಿಯುವ ತನಕ ಸಿಇಟಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿವೆ.
ದಾವಣಗೆರೆಯ ಬಾಪೂಜಿ ವೈದ್ಯಕೀಯ ಕಾಲೇಜು , ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಹೈಕೋರ್ಟ್ನಲ್ಲಿನ ತೀರ್ಪಿಗೆ ಬದ್ಧರಾಗಿರುವಂತೆ ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಪ್ರವೇಶ ನೀಡುತ್ತಿವೆ.
ನ್ಯಾಯಮೂರ್ತಿ ಎ.ಬಿ. ಮುರುಗೋಡ್ ಸಮಿತಿ ಪ್ರಕಾರ ಮೊದಲ ವರ್ಷದ ವೈದ್ಯಕೀಯ ಶಿಕ್ಷಣಕ್ಕೆ 1.6 ಲಕ್ಷ ರೂ.ಗಳನ್ನು ಪಾವತಿಸಬೇಕು. ಹೊಸ ರಾಜಿ ಸೂತ್ರದಂತೆ ವಾರ್ಷಿಕ ಶುಲ್ಕ 3.75 ಲಕ್ಷ ಪಾವತಿಸಬೇಕಾಗಿದೆ. ಉಳಿಕೆ ಬಾಕಿ ಹಣ ಪಾವತಿಸುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಒತ್ತಾಯಿಸುತ್ತಿವೆ. ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ದಾಖಲಿಸಿರುವ ದಾವೆ ಹೈಕೋರ್ಟ್ನಲ್ಲಿ ಮಂಗಳವಾರ ವಿಚಾರಣೆಗೆ ಬರಲಿದೆ.
ಹೈಕೋರ್ಟ್ನಲ್ಲಿನ ದಾವೆ ಇತ್ಯರ್ಥವಾಗುವವರೆಗೆ ಪ್ರವೇಶ ನೀಡುವುದಿಲ್ಲ ಎಂದು ಕಾಮೇಡ್-ಕೆ ಅಧ್ಯಕ್ಷ ಆರ್.ಎಲ್.ಜಾಲಪ್ಪ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು