ಚಿತ್ರದುರ್ಗದ ‘ಸಂತೆಹೊಂಡ’ದಲ್ಲಿ 5 ವರ್ಷದ ನಂತರ ಗಂಗಮ್ಮ ನಕ್ಕಳು
ಚಿತ್ರದುರ್ಗದ ‘ಸಂತೆಹೊಂಡ’ದಲ್ಲಿ 5 ವರ್ಷದ ನಂತರ ಗಂಗಮ್ಮ ನಕ್ಕಳು
ಕೋಟೆಯ ಸಾಲು ಹೊಂಡಗಳೆಲ್ಲ ಭರ್ತಿ....
- ದಟ್ಸ್ಕನ್ನಡ ಬ್ಯೂರೊ
ಕನ್ನಂಬಾಡಿ, ತುಂಗಭದ್ರೆ, ಆಲಮಟ್ಟಿಯಂಥ ಜಲಾಶಯಗಳೇ ತುಂಬಿ ತುಳುಕುವಾಗ ಸಂತೆಹೊಂಡದ್ದೇನು ಮಹಾ ಎನ್ನಬೇಡಿ. ಹಾಗೆಂದು ನೀವು ಭಾವಿಸಿದಲ್ಲಿ ನಿಮಗೆ ಚಿತ್ರದುರ್ಗದ ಪರಿಸರ ಗೊತ್ತಿಲ್ಲವೆಂದೇ ಅರ್ಥ. ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ದುರ್ಗವೂ ಒಂದು ಎನ್ನುವುದು ನಿಮ್ಮ ಗಮನದಲ್ಲಿರಲಿ. ಆ ವಿಷಯ ಬಿಡಿ, ಸಂತೆಹೊಂಡದ ನೀರಿನ ಕಲಕಲ ಕುರಿತು ಮಾತಾಡೋಣ.
ಮುಂಗಾರು ಕೃಪೆ ಚೆನ್ನಾಗಿದ್ದರೂ ಸಂತೆಹೊಂಡ ಇನ್ನೂ ತುಂಬಿಲ್ಲ . ಆದರೆ ಸುಮಾರು 25 ಅಡಿ ನೀರು ಹೊಂಡದಲ್ಲಿ ಸಂಗ್ರಹವಾಗಿದ್ದು , ಪಟ್ಟಣದ ನಾಗರಿಕರಲ್ಲಿ ಸಂತಸ ಮೂಡಿಸಿದೆ.
ಸಂತೆಹೊಂಡದ್ದು 310 ವರ್ಷಗಳ ಐತಿಹಾಸ. ಚಿತ್ರದುರ್ಗದ ಪಾಳೇಗಾಕ ಬಿಚ್ಚುಗತ್ತಿ ಭರಮಣ್ಣ ನಾಯಕ 1693ರಲ್ಲಿ ಕಟ್ಟಿಸಿದ ಹೊಂಡವಿದು. ಸೈನ್ಯಕ್ಕೆ ಕುಡಿಯುವ ನೀರು ಒದಗಿಸುತ್ತಿಂತೆ ಈ ಸಂತೆಹೊಂಡ. ಭರಮಣ್ಣ ನಾಯಕ ನೀರಿನ ತಾವು ಕಟ್ಟಿಸುವುದರಲ್ಲಿ ಹೆಸರುವಾಸಿ. ಭರಮಣ್ಣನಷ್ಟೇ ಅಲ್ಲ ದುರ್ಗದ ಪಾಳೇಗಾರರೆಲ್ಲರೂ ಅರವಟ್ಟಿಗೆಯಂ ಇಡಿಸು ಕುಲೀನರೇ. ಸುಮ್ಮನೇ ಕಲ್ಲಿನಕೋಟೆಯಲ್ಲೊಂದು ಸುತ್ತು ಬನ್ನಿ : ಗೋಪಾಲಸ್ವಾಮಿ ಹೊಂಡ, ಅಕ್ಕನ ಹೊಂಡ, ತಂಗಿ ಹೊಂಡ, ತಣ್ಣೀರು ದೊಣಿ, ಸಿಹಿನೀರಿನ ಹೊಂಡ- ಹೀಗೆ ಹೊಂಡಗಳ ಮೆರವಣಿಗೆ. ಹೆಚ್ಚೂಕಮ್ಮಿ ಎಲ್ಲ ಹೊಂಡಗಳೂ ಈಗ ತುಂಬಿವೆ.
ಸಂತೆಹೊಂಡ 80 ಅಡಿಗಳಷ್ಟು ಆಳವಿದೆ. ಈ ಹೊಂಡದ ನಿರ್ಮಾಣಕ್ಕೆ ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದೆ ಎನ್ನುತ್ತಾರೆ ತಜ್ಞರು. ಹೊಂಡದ ನೀರಂತೂ ಎಳನೀರು. ಸ್ಪಟಿಕಷ್ಟು ಸ್ಪಷ್ಟ .
ಈ ಇತಿಹಾಸ ಪ್ರಸಿದ್ಧ ಹೊಂಡವೊಮ್ಮೆ ಕಸಕಡ್ಡಿ ಗಲೀಜುಗಳನ್ನು ತುಂಬುವ ಸ್ಥಳವೂ ಆಗಿತ್ತು . ಆದರೆ ಪಟ್ಟಣದ ಕೆಲ ಹಿರೀಕರು ಜಾಗೃತರಾಗಿ, ಹೊಂಡ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಈ ಬಾರಿಯ ಮಳೆಗಾಲದಲ್ಲಿ ಸಂತೆಹೊಂಡ ತುಂಬುವುದೇ ? ಅಂತದೊಂದು ಸಮೃದ್ಧಿಯ ಕನಸು ದುರ್ಗದ ಜನತೆಯ ಕಣ್ಣಲ್ಲಿದೆ.
ಮುಖಪುಟ / ವಾಟ್ಸ್ ಹಾಟ್
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications