ಬಂಡವಾಳಗಾರರ ಪಾಲಿಗೆ ಕರ್ನಾಟಕ ಚುಂಬಕಕೇಂದ್ರ -ಸಚಿವ ಸಿಂಧ್ಯಾ
ಬಂಡವಾಳಗಾರರ ಪಾಲಿಗೆ ಕರ್ನಾಟಕ ಚುಂಬಕಕೇಂದ್ರ -ಸಚಿವ ಸಿಂಧ್ಯಾ
ಐದು ಸರ್ಕಾರಿ ಉದ್ದಿಮೆಗಳ ಪುನಶ್ಚೇತನ, ಒಂದೂವರೆ ಲಕ್ಷ ಉದ್ಯೋಗ ಸೃಷ್ಟಿ
ರಾಜ್ಯದಲ್ಲಿ ರೋಗಗ್ರಸ್ತ ಸರಕಾರಿ ಉದ್ದೀಮೆಗಳ ಮುಚ್ಚುವ ಬದಲಾಗಿ ಉದ್ದಿಮೆಗಳ ಪುನಶ್ಚೇತನಗೊಳಿಸುವುದು ಹಾಗೂ ಹೊಸದಾಗಿ 1.50 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದು ಸಮ್ಮಿಶ್ರ ಸರಕಾರದ ಉದ್ದೇಶ. 2001ರಲ್ಲಿ ಕಾಂಗ್ರೆಸ್ ಸರ್ಕಾರ ಬಂಡವಾಳ ಹಿಂತೆಗೆಯುವ (ಡಿಸ್ಇನ್ವೆಸ್ಟ್ ಮೆಂಟ್) ನೀತಿ ರೂಪಿಸಿತ್ತು. ಆದರೆ ಈಗಿನ ಸರ್ಕಾರಕ್ಕೆ ಯಾವುದೇ ಕೈಗಾರಿಕೆ ಮುಚ್ಚಬೇಕು ಎಂಬ ಉದ್ದೇಶವೇ ಇಲ್ಲ ಎಂದು ಸಿಂಧ್ಯಾ ಸ್ಪಷ್ಟಪಡಿಸಿದರು.
ನಷ್ಟದಲ್ಲಿರುವ ಸಣ್ಣ ಕೈಗಾರಿಕೆಗಳಿಗೆ ನವೆಂಬರ್ ತಿಂಗಳಿನಲ್ಲಿ 140 ಕೋಟಿ ರೂ. ಗಳ ಸಹಾಯಧನ ಬಿಡುಗಡೆ ಮಾಡಲಾಗುವುದು. ಮುಂದಿನ ಆಯವ್ಯಯದಲ್ಲಿ 150 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲು ಉಪಮುಖ್ಯ ಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ ಎಂದು ಹೇಳಿದರು.
ವಿವಿಧ ಕಂಪನಿಗಳು ರಾಜ್ಯದಲ್ಲಿ ಒಟ್ಟಾರೆ ಸುಮಾರು 23,319 ಕೋಟಿ ರೂ. ಬಂಡವಾಳ ಹೂಡುವ ಯೋಜನೆಗಳಿಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಉನ್ನತಾಧಿಕಾರಿ ಸಮಿತಿ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ. ಈ ವಿವಿಧ ಕಂಪನಿಗಳಿಂದ ರಾಜ್ಯದ ವಿವಿಧೆಡೆ ಹನ್ನೊಂದು ಯೋಜನೆಗಳು ಅಸ್ತಿತ್ವಕ್ಕೆ ಬರಲಿದೆ. ಈ ಕಂಪನಿಗಳು ಹೂಡುವ 23,319.91ಕೋಟಿ ರೂ. ಬಂಡವಾಳದಿಂದ 6,546 ಮಂದಿಗೆ ಕೆಲಸ ಸಿಗಲಿದೆ ಎಂದು ಸಿಂಧ್ಯಾ ಹೇಳಿದರು.
ಬಂಡವಾಳ ಹೂಡುವ ಕಂಪನಿಗಳು : ಒಎನ್ಜಿಸಿ-ಎಂಆರ್ಪಿಎಲ್, ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್,ಜಂದಾಲ್ ಥರ್ಮಲ್ ಪವರ್ ಕಂಪನಿ ಲಿಮಿಟೆಡ್, ಹಂಪಿ ಇಂಡಸ್ಟ್ರೀಸ್ ಲಿಮಿಟೆಡ್, ಸಿಪ್ಲಾ ಲಿಮಿಟೆಡ್, ಮುದ್ರಾ ಫ್ಯಾಬ್ರಿಕ್ಸ್ ಲಿಮಿಟೆಡ್, ದವನಂ ಕನ್ಸ್ಟ್ರಕ್ಷನ್ಸ್ ಪ್ರೆೃವೇಟ್ ಲಿಮಿಟೆಡ್ ಈ ಬಂಡವಾಳ ಹೂಡಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications