ಬೆಂಗಳೂರು ದೇಶದ ಕುರುಕ್ಷೇತ್ರ ; ‘ಧರ್ಮ’ ಯುದ್ಧ ಆರಂಭ -ಬಿಜೆಪಿ

ಬೆಂಗಳೂರು ದೇಶದ ಕುರುಕ್ಷೇತ್ರ ; ‘ಧರ್ಮ’ ಯುದ್ಧ ಆರಂಭ -ಬಿಜೆಪಿ
ಸತ್ಯಾಗ್ರಹ ಸಪ್ತಾಹದಲ್ಲಿ ಮಾಜಿ ಸಚಿವರಾದ ಯಶವಂತ್‌ ಸಿನ್ಹಾ ಬಂಧನ

ಬೆಂಗಳೂರು : ದೇಶದಲ್ಲಿ ಬೆಂಗಳೂರು ಹೊಸ ಕುರುಕ್ಷೇತ್ರವಾಗಿದೆ. ಉಮಾಭಾರತಿ ಪ್ರಕರಣ ಮಹಾಭಾರತದ ಹೊಸ ರೂಪ ವಾಗಿದ್ದು, ಧರ್ಮಯುದ್ದ ಆರಂಭಗೊಂಡಿದೆ. ಇದು ಮೂರನೇ ಸ್ವಾತಂತ್ರ್ಯ ಹೋರಾಟದಂತೆ ಭಾಸವಾಗುತ್ತಿದೆ. ದುರದೃ ಷ್ಟವೆಂದರೆ, ಕರ್ನಾಟಕದ ಮುಖ್ಯಮಂತ್ರಿ ಧರ್ಮಸಿಂಗ್‌ ವಿರುದ್ದ ನಡೆಸಬೇಕಾಗಿದೆ. ಹೆಸರಿನಲ್ಲಿ ಧರ್ಮ ಹೊಂದಿ ಅಧರ್ಮ ಪಾಲಿಸುತ್ತಿದ್ದಾರೆ. ಬಿಜೆಪಿ ಮೇಲಿನ ಕೋಪದಿಂದ ಉಮಾ ಪ್ರಕರಣವನ್ನು ಕೆದಕಲಾಗಿದೆ ಎಂದು ಹಿರಿಯ ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಯಶವಂತ್‌ ಸಿನ್ಹಾ ಆರೋಪಿಸಿದರು.

ಉಮಾಭಾರತಿ ಬಂಧಮುಕ್ತಿಗಾಗಿ ಬಿಜೆಪಿ ನಗರದ ಟೌನ್‌ ಹಾಲ್‌ ಮುಂಭಾಗದಲ್ಲಿ ನಡೆಸುತ್ತಿರುವ ಸತ್ಯಾಗ್ರಹದ ನಾಲ್ಕನೇದಿನವಾದ ಶನಿವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರದಲ್ಲಿನ ಯುಪಿಎ ಆಡಳಿತ ನೂರು ದಿನಗಳನ್ನು ಗಮನಿಸಿದರೆ ತೀವ್ರ ನಿರಾಸೆಯಾಗುತ್ತದೆ. ಪ್ರಧಾನಿ ಮನಮೋಹನ್‌ಸಿಂಗ್‌, ಮಾಂಟೆಕ್‌ ಸಿಂಗ್‌ ಆಹ್ಲುವಾಲಿಯಾ, ಚಿದಂಬರಂರಂಥ ಅರ್ಥಿಕ ತಜ್ಞರಿದ್ದರೂ, ಹಣದುಬ್ಬರ ಸರಕಾರದ ಹಿಡಿತದಲ್ಲಿಲ್ಲ ಎಂದು ಸಿನ್ಹಾ ಹೇಳಿದರು.

ಬಂಧನ : ಯಶವಂತ್‌ ಸಿನ್ಹಾ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಬಾಬು ಲಾಲ್‌ ಮರಾಂಡಿ, ಮಣಿಪುರದ ಮಾಜಿ ಸಚಿವ ಚೋಬಾ ಸಿಂಗ್‌, ಜಾರ್ಖಂಡ್‌ ಬಿಜೆಪಿ ಆಧ್ಯಕ್ಷ ರಘುವರ್‌ ದಾಸ್‌, ಬಸವನಗೌಡ ಪಾಟೀಲ್‌ ಯತ್ನಾಲ್‌ ಸೇರಿದಂತೆ ಜಾರ್ಖಂಡ್‌, ಒರಿಸ್ಸಾ, ರಾಜ್ಯಗಳಿಂದ ಆಗಮಿಸಿದ್ದ ಬಿಜೆಪಿ ಸಂಸದರು, ಕಾರ್ಯಕರ್ತರನ್ನು ಪೋಲೀಸರು ಬಂಧಿಸಿದರು.

ಸತ್ಯಾಗ್ರಹ ಸಪ್ತಾಹದ ಐದನೇ ದಿನವಾದ ಭಾನುವಾರ ಸಹಾ ಧರಣಿ ಮುಂದುವರೆದಿದೆ. ಉಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಲಿದ್ದು , ಬಿಜೆಪಿ ಕುತೂಹಲದಿಂದ ಕಾಯುತ್ತಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+