ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಮಾ ಬಂಧಮುಕ್ತಿಗಾಗಿ ಜೈಲು ಸೇರಿದ ಸಾವಿರಾರು ಕಾರ್ಯಕರ್ತರು

By Staff
|
Google Oneindia Kannada News

ಉಮಾ ಬಂಧಮುಕ್ತಿಗಾಗಿ ಜೈಲು ಸೇರಿದ ಸಾವಿರಾರು ಕಾರ್ಯಕರ್ತರು
ಸತ್ಯಾಗ್ರಹ 3ನೇ ದಿನಕ್ಕೆ; ಬಿಜೆಪಿ ಕಾರ್ಯದರ್ಶಿ ರಾಜನಾಥ ಸಿಂಗ್‌ ಬಂಧನ

ಬೆಂಗಳೂರು: ಉಮಾ ಭಾರತಿ ಬಂಧಮುಕ್ತಿಗಾಗಿ ಬಿಜೆಪಿ ನಡೆಸುತ್ತಿರುವ ಸತ್ಯಾಗ್ರಹದ ಮೂರನೇ ದಿನವಾದ ಶುಕ್ರವಾರ ಬಿಜೆಪಿ ಕಾರ್ಯದರ್ಶಿ ಹಾಗೂ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜನಾಥ ಸಿಂಗ್‌ ಸೇರಿದಂತೆ ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೋಲೀಸರು ಬಂಸಿದ್ದಾರೆ.

ಬಂಧನಕ್ಕೆ ಮುನ್ನ ಮಾತನಾಡಿದ ರಾಜನಾಥ ಸಿಂಗ್‌- ಉಮಾ ಭಾರತಿ ಮೇಲಿನ ಮೊಕದ್ದಮೆಗಳನ್ನು ವಾಪಸ್‌ ಪಡೆದು ಧಾರವಾಡ ಜೈಲಿನಿಂದ ಬಿಡುಗಡೆ ಮಾಡಬೇಕು. ಕೇಂದ್ರ ಸಚಿವ ಸಂಪುಟದಿಂದ ಕಳಂಕಿತ ಸಚಿವರನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಮೈಸೂರು, ಹಾಸನ, ಗುಲ್ಪರ್ಗ, ರಾಯಚೂರು ಜಿಲ್ಲೆ ಹಾಗೂ ರಾಜಸ್ತಾನ, ಛತ್ತೀಸಗಢ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಿಂದ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಜೈಲ್‌ಭರೋ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X