ಕರ್ನಾಟಕ ಬಂದ್ಗೆ ನೀರಸ ಪ್ರತಿಕ್ರಿಯೆ; ಶಾಲೆಕಾಲೇಜಿಗೆ ರಜೆಯಿಲ್ಲ
ಕರ್ನಾಟಕ
ಬಂದ್ಗೆ
ನೀರಸ
ಪ್ರತಿಕ್ರಿಯೆ;
ಶಾಲೆಕಾಲೇಜಿಗೆ
ರಜೆಯಿಲ್ಲ
ಹುಬ್ಬಳ್ಳಿಯಲ್ಲಿ
ನ್ನೂ
ಕುದಿಮೌನ,
ಪೊಲೀಸ್
ಬಿಗಿ
ಬಂದೋಬಸ್ತ್
ಉಮಾಭಾರತಿ ಅವರ ಮೇಲಿನ ಕ್ರಿಮಿನಲ್ ಪ್ರಕರಣವನ್ನು ಕೈಬಿಡುವಂತೆ ಒತ್ತಾಯಿಸಿ ಆ.26ರ ಗುರುವಾರ ಕರ್ನಾಟಕ ಬಂದ್ಗೆ ರಾಜ್ಯ ಬಿಜೆಪಿ ಕರೆ ನೀಡಿತ್ತು . ಬಂದ್ಕರೆಗೆ ನೀರಸ ಆರಂಭಿಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು , ಜನಜೀವನ ಎಂದಿನಂತಿದೆ. ನಗರಸಾರಿಗೆ ಹಾಗೂ ಕೆಎಸ್ಆರ್ಟಿಸಿ ಬಸ್ಸು ಸಂಚಾರ ಮಾಮೂಲಿನಂತಿದೆ.
ಬಿಜೆಪಿ ಕ್ಷುಲ್ಲಕ ಕಾರಣಕ್ಕಾಗಿ ಬಂದ್ಗೆ ಕರೆ ನೀಡಿದ್ದು , ಈ ಬಂದ್ ಬೆಂಬಲಿಸಬಾರದೆಂದು ಮುಖ್ಯಮಂತ್ರಿ ಧರ್ಮಸಿಂಗ್ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ಇಲ್ಲ , ರಜೆ ನೀಡುವ ಅಗತ್ಯವೂ ಇಲ್ಲ ಎಂದು ಧರ್ಮಸಿಂಗ್ ಹೇಳಿದ್ದಾರೆ.
ಬಂದ್ ಕರೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಮಾಡಿದೆ. ಹುಬ್ಬಳ್ಳಿಯಲ್ಲಿ ಬಿಗುಮೌನದ ವಾತಾವರಣ ಇನ್ನೂ ಮುಂದುವರಿದಿದ್ದು , ಪೊಲೀಸರು ಕಟ್ಟೆಚ್ಚರದಿಂದ ಇದ್ದಾರೆ. ಪೊಲೀಸ್ ಸಿಬ್ಬಂದಿಯಾಂದಿಗೆ 16 ಸಾವಿರ ಹೋಂಗಾರ್ಡ್ಗಳು ಹಾಗೂ ಕ್ಷಿಪ್ರ ಕಾರ್ಯ ಪಡೆಗಳು ಹುಬ್ಬಳ್ಳಿಯಲ್ಲಿ ಬೀಡುಬಿಟ್ಟಿದ್ದು , ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು