ರಾಜ್ಯಕ್ಕೆ ಕಾಲಿಟ್ಟ ತಕ್ಷಣ ಉಮಾ ಭಾರತಿ ಬಂಧನ -ಡಿಜಿಪಿ ಬೋರ್ಕರ್
ರಾಜ್ಯಕ್ಕೆ
ಕಾಲಿಟ್ಟ
ತಕ್ಷಣ
ಉಮಾ
ಭಾರತಿ
ಬಂಧನ
-ಡಿಜಿಪಿ
ಬೋರ್ಕರ್
ಮುಂಬಯಿಯಿಂದ
ಬರಿಗೈಲಿ
ವಾಪಸ್ಸಾಗುತ್ತಿರುವ
ಪೊಲೀಸ್
ಅಧಿಕಾರಿಗಳ
ತಂಡ
10 ವರ್ಷ ಹಿಂದಿನ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಉಮಾ ಭಾರತಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದ್ದು , ಅವರು ಕರ್ನಾಟಕಕ್ಕೆ ಕಾಲಿಟ್ಟ ತಕ್ಷಣ ಬಂಧಿಸಲಾಗುವುದು ಎಂದು ಆ.24 ಮಂಗಳವಾರ ಡಿಜಿಪಿ ಬೋರ್ಕರ್ ಸುದ್ದಿಗಾರರಿಗೆ ತಿಳಿಸಿದರು.
ನ್ಯಾಯಾಲಯದ ಮುಂದೆ ಶರಣಾಗಲು ಉಮಾ ಭಾರತಿ ಹುಬ್ಬಳ್ಳಿ ಹಾದಿಯಲ್ಲಿದ್ದಾರೆ. ಹೀಗಾಗಿ ಅವರನ್ನು ಬಂಧಿಸಲು ಭೋಪಾಲ್ಗೆ ತೆರಳುತ್ತಿದ್ದ ಪೊಲೀಸ್ ಅಧಿಕಾರಿಗಳ ತಂಡ ಮುಂಬಯಿಯಿಂದಲೇ ವಾಪಸ್ಸಾಗಿದೆ. ಉಳಿದಿರುವುದು ಉಮಾ ಬಂಧನದ ಪ್ರಕ್ರಿಯೆ ಮಾತ್ರ ಎಂದು ಬೋರ್ಕರ್ ಹೇಳಿದರು.
ಉಮಾ ಅವರನ್ನು ಯಾವ ಸ್ಥಳದಲ್ಲಿ ಬಂಧಿಸಬೇಕು ಎನ್ನುವುದನ್ನು ಇನ್ನೂ ತೀರ್ಮಾನಿಸಿಲ್ಲ . ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸುಮಾರು 4000 ಮಂದಿ ಪೊಲೀಸರು ಹುಬ್ಬಳ್ಳಿಯಲ್ಲಿ ಕರ್ತವ್ಯ ಪಾಲನೆಯಲ್ಲಿದ್ದಾರೆ. ಬುಧವಾರ ಸಂಜೆಯವರೆಗೂ ನಗರದಲ್ಲಿ ನಿಷೇಧಾಜ್ಞೆ ಹೇರಲಾಗಿದೆ ಎಂದು ಡಿಜಿಪಿ ಬೋರ್ಕರ್ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು