ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಮಾಭಾರತಿ ಹಿನ್ನಡೆ; ಪ್ರಕರಣ ಕೈಬಿಡಲು ಹುಬ್ಬಳ್ಳಿಕೋರ್ಟ್‌ ನಕಾರ

By Staff
|
Google Oneindia Kannada News

ಉಮಾಭಾರತಿ ಹಿನ್ನಡೆ; ಪ್ರಕರಣ ಕೈಬಿಡಲು ಹುಬ್ಬಳ್ಳಿಕೋರ್ಟ್‌ ನಕಾರ
ಸಮಯ ಮಿತಿ ಮುಗಿದಿದೆ, ಉಮಾ ವಕೀಲರ ವಾದ ಪಕ್ಕಕ್ಕೆ.

ಹುಬ್ಬಳ್ಳಿ : ಇಡೀ ದೇಶದ ಗಮನ ಸೆಳೆದಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಅವರ ಮೇಲಿನ ಕ್ರಿಮಿನಲ್‌ ಮೊಕದ್ದಮೆಯ ವಿಚಾರಣೆಯನ್ನು ಕೈಬಿಡದೆ ಮುಂದುವರೆಸಲು ಹುಬ್ಬಳ್ಳಿಯ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಹತ್ತು ವರ್ಷದ ನಂತರ ಮೊಕದ್ದಮೆಗೆ ಉದ್ದೇಶಪೂವಕವಾಗಿ ಜೀವತುಂಬಲಾಗಿದೆ. ಕಾಲದ ಮಿತಿ ದಾಟಿರುವ ಈ ಪ್ರಕರಣವನ್ನು ಕೈಬಿಡಬೇಕು ಎನ್ನುವ ಉಮಾ ಭಾರತಿ ವಕೀಲ ಆರ್‌.ಆರ್‌.ಪಾಟೀಲರ ವಾದವನ್ನು ನ್ಯಾಯಮೂರ್ತಿಗಳು ತಳ್ಳಿಹಾಕಿದರು. ಉಮಾ ವಿರುದ್ಧ ಹೊರಡಿಸಿರುವ ಜಾಮೀನು ರಹಿತ ವಾರಂಟ್‌ ಜಾರಿಯಲ್ಲಿರುತ್ತದೆ ಎಂದೂ ನ್ಯಾಯಮೂರ್ತಿ ಸ್ಪಷ್ಟಪಡಿಸಿದರು. ಇದರೊಂದಿಗೆ ಉಮಾ ಭಾರತಿ ಹಿನ್ನಡೆ ಅನುಭವಿಸಿದಂತಾಯಿತು.

ನಿಕಟಪೂರ್ವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣರ ಸರ್ಕಾರ, ಉಮಾ ಭಾರತಿ ಮೇಲಿನ ಕ್ರಿಮಿನಲ್‌ ಮೊಕದ್ದಮೆಯನ್ನು ಕೈಬಿಡುವಂತೆ ಅರ್ಜಿ ಸಲ್ಲಿಸಿತ್ತು . ಆದರೆ ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಮೊಕದ್ದಮೆಯನ್ನು ಕೈಬಿಡದಿರಲು ನಿರ್ಧರಿಸಿದೆ.

1994ರಲ್ಲಿ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿದ ಸಂದರ್ಭದಲ್ಲಿ ಉಂಟಾದ ಕೋಮು ಹಿಂಸಾಚಾರ- ಕರ್ಫ್ಯೂ ಹೇರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮಾ ಭಾರತಿ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.

(ಪಿಟಿಐ)

ವಾರ್ತಾ ಸಂಚಯ
ಭೋಪಾಲ್‌ನತ್ತ ರಾಜ್ಯದ ಪೊಲೀಸ್‌ : ಉಮಾ ರಾಜೀನಾಮೆ ಸ್ವೀಕೃತ

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X