ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರ ಕೋರ್ಟಲ್ಲೇ ಜಯಲಲಿತಾ ವಿಚಾರಣೆ-ಸುಪ್ರಿಂಕೋರ್ಟ್‌

By Staff
|
Google Oneindia Kannada News

ಬೆಂಗಳೂರ ಕೋರ್ಟಲ್ಲೇ ಜಯಲಲಿತಾ ವಿಚಾರಣೆ-ಸುಪ್ರಿಂಕೋರ್ಟ್‌
ವಾರದೊಳಗೆ ದಾಖಲೆಗಳ ರವಾನಿಸಲು ತಮಿಳುನಾಡಿಗೆ ನಿರ್ದೇಶನ

ನವದೆಹಲಿ : ಆಸ್ತಿ ದುರುಪಯೋಗಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಎದುರಿಸುತ್ತಿರುವ ಆರೋಪ ಕುರಿತ ವಿಚಾರಣೆಯನ್ನು ಬೆಂಗಳೂರಿನಲ್ಲಿಯೇ ನಡೆಸಲು ಸುಪ್ರಿಂಕೋರ್ಟ್‌ ಆದೇಶಿಸಿದ್ದು , ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಕಳುಹಿಸಿಕೊಡುವಂತೆ ತಮಿಳುನಾಡು ಸರ್ಕಾರಕ್ಕೆ ತಿಳಿಸಿದೆ.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಸಂಘರ್ಷದ ವಾತಾವರಣವಿದೆ. ಇಂಥ ಸಂದರ್ಭದಲ್ಲಿ ಪ್ರಕರಣದ ತನಿಖೆಗೆ ಬೆಂಗಳೂರಿನಲ್ಲಿ ಅಡ್ಡಿ ಉಂಟಾಗಬಹುದು. ಆದುದರಿಂದ ವಿಚಾರಣೆಯ ಸ್ಥಳವನ್ನು ಬೆಂಗಳೂರಿನ ಬದಲು ಕೇರಳಕ್ಕೆ ಬದಲಿಸುವಂತೆ ಜಯಲಲಿತಾ ಕೋರಿದ್ದರು. ವಿಚಾರಣೆಯನ್ನು ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟನೆ ಸಲ್ಲಿಸಿತ್ತು .

ಜಯಲಲಿತಾ ಮನವಿಯನ್ನು ಪರಿಶೀಲಿಸಿರುವ ನ್ಯಾಯಪೀಠ, ಬೆಂಗಳೂರಿನಲ್ಲಿಯೇ ವಿಚಾರಣೆ ನಡೆಸುವಂತೆ ಸೋಮವಾರ (ಆ.23) ನಿರ್ದೇಶನ ನೀಡಿದೆ. ಇನ್ನೊಂದು ವಾರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ರವಾನಿಸಬೇಕು ಎಂದೂ ನ್ಯಾಯಪೀಠ ಹೇಳಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X