ನಾಗರಪಂಚಮಿ ಹಬ್ಬದ ಹೊತ್ತು ದಾವಣಗೆರೆಯಲ್ಲಿ ಜೋಡಿ ಕೋಬ್ರಾ
ನಾಗರಪಂಚಮಿ ಹಬ್ಬದ ಹೊತ್ತು ದಾವಣಗೆರೆಯಲ್ಲಿ ಜೋಡಿ ಕೋಬ್ರಾ
ನಾಗರ ನೋಡಲು ಮುಗಿಬೀಳುತ್ತಿರುವ ಬೆಣ್ಣೆದೋಸೆ ನಗರಿಯ ಮಂದಿ
ದಾವಣಗೆರೆಯ ಪ್ರಸಿದ್ಧ ಆಹಾರ ಮಳಿಗೆಗಳಲ್ಲಿ ಆಹಾರ್-2000 ಕೂಡಾ ಒಂದು. ಈ ಆಹಾರದ ಅಂಗಡಿಯಲ್ಲೀಗ ಹಾವು ಬಂದುಬಿಟ್ಟಿದೆ. ಒಂದಲ್ಲಾ ಎರಡು. ಜೋಡಿ ಕೋಬ್ರಾ ! ಆದರೆ ತಮಾಷೆ ನೋಡಿ, ಈ ನಾಗರಗಳಿಗೆ ಯಾರೂ ಹೆದರುತ್ತಿಲ್ಲ . ಏಕೆಂದರೆ ಇವುಗಳಲ್ಲಿ ವಿಷವಿಲ್ಲ ; ಇರುವುದು ಸಕ್ಕರೆ, ಸಿಹಿಯೋ ಸಿಹಿ. ಇದೊಂದು ಕೇಕ್ ಕಲಾಕೃತಿ ಎನ್ನುವ ವಿಷಯ ನಿಮಗೀಗಾಗಲೇ ಅರ್ಥವಾಗಿರಬೇಕು. ಹೌದು, ನಿಜ.
ಕ್ರಿಸ್ಮಸ್, ಹೊಸ ವರ್ಷ.... ಇಂಥ ಸಂದರ್ಭಗಳಲ್ಲಿ ಆಹಾರ್-2000 ವಿಶೇಷ ಕೇಕ್ಗಳನ್ನು ಪ್ರದರ್ಶಿಸುವುದು ರೂಢಿ (ಬೆಂಗಳೂರಿನಲ್ಲಿ ನೀಲ್ಗಿರೀಸ್ ಕೂಡ ಇಂಥ ಪ್ರದರ್ಶಗಳನ್ನು ಏರ್ಪಡಿಸುತ್ತದೆ). ಈ ಬಾರಿ ಆಹಾರ್-2000 ಜೋಡಿ ಕೋಬ್ರಾಗಳ ಕೇಕ್ ಕಲಾಕೃತಿ ಪ್ರದರ್ಶನಕ್ಕಿಟ್ಟಿದೆ. ಅಂಗಡಿಯ ತುಂಬಾ ಜನವೋ ಜನ. ಈ ಬಾರಿ ಏನು ವಿಶೇಷ ಅಂದಿರಾ ? ಅದೇ ಸ್ವಾಮಿ, ನಾಗರ ಪಂಚಮಿ ! ಆ.20ರ ಶುಕ್ರವಾರ ನಾಗರ ಪಂಚಮಿ ; ಸೋದರಿ ನೆನಪಿಸಿದ್ದನ್ನು ಮರೆತಿರಾ ?
ಆಗಸ್ಟ್ 23ರವರೆಗೂ ನಾಗರ ಕೇಕ್ಗಳು ಸಾರ್ವಜನಿಕ ಪ್ರದರ್ಶನಕ್ಕಿವೆ ಎಂದು ಅಂಗಡಿ ಮಾಲೀಕ ನಾರಾಯಣ ಭಟ್ ತಿಳಿಸಿದ್ದಾರೆ. 25 ಕೇಜಿಗಳ ಕೇಕ್ ಬಳಸಿ ಈ ಕೋಬ್ರಾಗಳ ತಯಾರಿಸಿದ ಕಲಾವಿದ, ಕೇಕ್ ಮಾಸ್ಟರ್ ಎಂದು ಹೆಸರಾದ ಕುಮಾರ್.
ಕೇಕ್ ಕೋಬ್ರಾಗಳೊಂದಿಗೆ ಹಣ್ಣುಗಳು ಹಾಗೂ ಇನ್ನಿತರ ತಿನಿಸುಗಳೂ ಪ್ರದರ್ಶನಕ್ಕಿವೆ. ಇವುಗಳೆಲ್ಲ ಕೇಕ್ ಆಕೃತಿಗಳೆಂದು ಬೇರೆ ಹೇಳಬೇಕಿಲ್ಲವಷ್ಟೆ ? ಒಟ್ಟಿನಲ್ಲಿ , ಆಹಾರ್-2000 ಹೇಳುವುದಿಷ್ಟೇ , ಕೇಕ್ ತಿನ್ನಿರೋ ನೀವೆಲ್ಲರೂ! ನಾಗರ ಪಂಚಮಿ ಕೇಕ್ ತಿನ್ನಲಿಕ್ಕೊಂದು ನೆಪ. ಏನಂತೀರಿ ?
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications