ಮಧ್ಯಪ್ರದೇಶಕ್ಕೆ ಬನ್ನಿ , ವಿಪ್ರೋಗೆ ರತ್ನಗಂಬಳಿ ಹಾಸಿದ ಉಮಾಭಾರತಿ
ಮಧ್ಯಪ್ರದೇಶಕ್ಕೆ
ಬನ್ನಿ
,
ವಿಪ್ರೋಗೆ
ರತ್ನಗಂಬಳಿ
ಹಾಸಿದ
ಉಮಾಭಾರತಿ
ಮೂಲಭೂತ
ವ್ಯವಸ್ಥೆಗಳ
ಪರಿಶೀಲನೆಯ
ನಂತರ
ಮಧ್ಯಪ್ರದೇಶಕ್ಕೆ
ಹೋಗುವ
ಚಿಂತನೆ
-ಪ್ರೇಂಜಿ
ಮಧ್ಯಪ್ರದೇಶದಲ್ಲಿ ವಿಪ್ರೋದ ಕಾರ್ಯಾಚರಣೆ ಶುರು ಮಾಡುವ ಬಗ್ಗೆ ಅಜೀಂ ಪ್ರೇಂಜಿ ಒಲವು ವ್ಯಕ್ತಪಡಿಸಿದ್ದಾರೆ. ಆದರೆ ಅದಕ್ಕೂ ಮುನ್ನ ಮೂಲಭೂತ ವ್ಯವಸ್ಥೆಗಳ ಪರಿಶೀಲನೆಗಾಗಿ ಮಧ್ಯಪ್ರದೇಶಕ್ಕೆ ತಂಡವೊಂದನ್ನು ಕಳುಹಿಸುವುದಾಗಿ ತಮಗೆ ಹೇಳಿರುವುದು ಮಧ್ಯಪ್ರದೇಶ ಮುಖ್ಯಮಂತ್ರಿ ಉಮಾ ಭಾರತಿ ಮಂಗಳವಾರ (ಆ.17) ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರಿನ ಸರ್ಜಾಪುರದಲ್ಲಿನ ವಿಪ್ರೋ ಕೇಂದ್ರ ಕಚೇರಿಯಲ್ಲಿ ವಿಪ್ರೋತ್ತಮ ಪ್ರೇಂಜಿ ಜೊತೆ ಸುಮಾರು 1 ತಾಸು ಮಾತುಕತೆ ನಡೆಸಿದ ನಂತರ ಉಮಾ ಭಾರತಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರಿನಿಂದಾಚೆ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ವಿಪ್ರೋ ಬಯಸಿದೆಯೆಂದು ನಾವು ಕೇಳಿದ್ದೇವೆ. ಆ ಕಾರಣದಿಂದಲೇ ಮಧ್ಯಪ್ರದೇಶಕ್ಕೆ ಅವರನ್ನು ಆಹ್ವಾನಿಸಲು ಬಯಸಿದ್ದೇವೆ. ಭೋಪಾಲ್ ಹಾಗೂ ಇಂದೋರ್ನಲ್ಲಿ ಅವರು ಕಾರ್ಯಾಚರಣೆ ಶುರು ಮಾಡಬಹುದು ಎಂದು ಉಮಾ ಭಾರತಿ ಹೇಳಿದರು.
ಮಧ್ಯಪ್ರದೇಶದಲ್ಲಿ ಬಂಡವಾಳ ಹೂಡಿಕೆಗೆ ಸ್ನೇಹಪರ ವಾತಾವರಣವಿದೆ. ಭೂಪಾಲ್ ಹಾಗೂ ಇಂದೋರ್ನಲ್ಲಿ ಐಟಿ ಕಂಪನಿಗಳು ಬಯಸಿದಲ್ಲಿ ಭೂಮಿ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಉಮಾ ಭಾರತಿ ಹೇಳಿದರು.
ರಾಜ್ಯದಿಂದ ಹೊರಗೆ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಲು ವಿಪ್ರೋ ಹಾಗೂ ಇನ್ಫೋಸಿಸ್ ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಉಮಾ ಭಾರತಿಯವರ ಪ್ರಯತ್ನಗಳು ಮಹತ್ವ ಪಡೆದುಕೊಂಡಿವೆ. ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ್ಫಐಟಿ ನೀತಿ ಹಾಗೂ ಬೆಂಗಳೂರಿನಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಇನ್ಫೋಸಿಸ್ ಹಾಗೂ ವಿಪ್ರೊ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿವೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ