ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಠಮಟ್ಟಕ್ಕೆ ಕನ್ನಂಬಾಡಿ : ತಗ್ಗುಪ್ರದೇಶದ ಜನರಿಗೆ ಪ್ರವಾಹದ ಆತಂಕ

By Staff
|
Google Oneindia Kannada News

ಕಂಠಮಟ್ಟಕ್ಕೆ ಕನ್ನಂಬಾಡಿ : ತಗ್ಗುಪ್ರದೇಶದ ಜನರಿಗೆ ಪ್ರವಾಹದ ಆತಂಕ
122.72 ಅಡಿ ಮುಟ್ಟಿದ ಕೃಷ್ಣರಾಜಸಾಗರ ! ಅದು ಜಲ ವೈಭವ !!

ಬೆಂಗಳೂರು: ತೀವ್ರ ಬರದಿಂದ ಕಂಗಾಲಾಗಿದ್ದ ಮಂಡ್ಯ-ಮೈಸೂರು ರೈತರಿಗೆ, ಬಹುತೇಕ ಭರ್ತಿಯಾಗುವ ಹಂತ ತಲುಪಿರುವ ಕೃಷ್ಣ ರಾಜಸಾಗರ ಜಲಾಶಯ ಈ ವರ್ಷ ಉತ್ಸಾಹ ತುಂಬಿದೆ. ಕಳೆದ ಐದು ವರ್ಷಗಳ ನಂತರ ಜಲಾಶಯ ತುಂಬುತ್ತಿದೆ. ಸೋಮವಾರ ಜಲಾಶಯದ ನೀರಿನ ಮಟ್ಟ 122.72 ಅಡಿ ತಲುಪಿದೆ(ಗರಿಷ್ಠ 124 ಅಡಿ) . ಪ್ರಸ್ತುತ ಜಲಾಶಯಕ್ಕೆ 10.319 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿದೆ.

ಜಲಾಶಯ ಅಪಾಯದ ಮಟ್ಟ ತಲುಪಿರುವ ಕಾರಣ ಯಾವುದೇ ಕ್ಷಣದಲ್ಲಿ ನೀರನ್ನು ನದಿಗೆ ಹರಿದು ಬಿಡುವ ಸಾಧ್ಯತೆಗಳಿವೆ. ಸದ್ಯಕ್ಕೆ ನಾಲೆಗಳಿಗೆ ಮಾತ್ರ 4,945 ಕ್ಯೂಸೆಕ್ಸ್‌ ನೀರನ್ನು ಹರಿಸಲಾಗುತ್ತಿದೆ. ಮುಖ್ಯಮಂತ್ರಿ ಧರ್ಮಸಿಂಗ್‌ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲು ಸಿದ್ಧತೆ ನಡೆಸಿದ್ದಾರೆ.

ವರುಣನ ಕ್ಷಪೆಯಿಂದ ಕೆ.ಆರ್‌.ಎಸ್‌ ಭರ್ತಿಯಾಗುತ್ತಿದ್ದು, ಕರ್ನಾಟಕ ಹಾಗು ತಮಿಳುನಾಡಿನ ನಡುವೆ ಕಾವೇರುತ್ತಿದ್ದ ‘ಕಾವೇರಿ’ ವಿವಾದ ಈ ವರ್ಷ ತಣ್ಣಗಾಗಲಿದೆ. ಮಂಡ್ಯ-ಮೈಸೂರು ಮಾತ್ರವಲ್ಲದೇ ಬೆಂಗಳೂರು ಮತ್ತಿತರ ಪ್ರಮುಖ ನಗರಗಳಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆಯೂ ಕೆ.ಆರ್‌.ಎಸ್‌ ಜಲಾಶಯ ತುಂಬಿದ ಕಾರಣ ಬಗೆಹರಿಯಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X