Get Updates
Get notified of breaking news, exclusive insights, and must-see stories!

ಜನತೆ ಕಷ್ಟಸುಖ ಅರಿಯಲು ಮನಮೋಹನ್‌ರಿಂದ ಜನತಾದರ್ಬಾರ್‌

ಜನತೆ ಕಷ್ಟಸುಖ ಅರಿಯಲು ಮನಮೋಹನ್‌ರಿಂದ ಜನತಾದರ್ಬಾರ್‌
ಪ್ರತಿದಿನ ನಾಗರಿಕರೊಂದಿಗೆ ಪ್ರಧಾನಿ ಭೇಟಿ, ಅಹವಾಲು ಕೇಳಿಕೆ

ನವದೆಹಲಿ : ಜನತೆಯ ಕಷ್ಟಸುಖಗಳನ್ನು ನೇರವಾಗಿ ಅರಿಯುವ ಉದ್ದೇಶದಿಂದ ಜನತಾ ದರ್ಬಾರ್‌ ಎನ್ನುವ ವಿಶಿಷ್ಠ ಕಾರ್ಯಕ್ರಮವನ್ನು ಪ್ರಧಾನಿ ಮನಮೋಹನ್‌ಸಿಂಗ್‌ ಹಮ್ಮಿಕೊಂಡಿದ್ದಾರೆ.

ಜನತೆಯನ್ನು ನೇರವಾಗಿ ಭೇಟಿಮಾಡಿ ಅವರ ಕುಂದುಕೊರತೆಗಳನ್ನು ಬಗೆಹರಿಸವುದೇ ಜನತಾ ದರ್ಬಾರ್‌ನ ಮುಖ್ಯ ಉದ್ದೇಶವಾಗಿದೆ. ಒಂದು ತಾಸು ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮನಮೋಹನ್‌ಸಿಂಗ್‌ ಜನರನ್ನು ಖುದ್ದು ಭೇಟಿ ಮಾಡಿ ಅವರ ಅಹವಾಲು ಆಲಿಸುವರು.

ಈಗಾಗಲೇ ಜನತಾ ದರ್ಬಾರ್‌ ಕಾರ್ಯಕ್ರಮ ಆರಂಭವಾಗಿದ್ದು , ಅನೇಕ ಸಭೆಗಳು ನಡೆದಿವೆ ಎಂದು ಪ್ರಧಾನಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. ಈ ವಿಶಿಷ್ಠ ಕಾರ್ಯಕ್ರಮದ ಮೂಲಕ ಆರ್ಥಿಕ ಹಾಗೂ ರಾಜಕೀಯ ಪರಿಣಿತರೆಂದು ಹೆಸರಾದ ಮನಮೋಹನ್‌ ತಮ್ಮ ಮಾನವೀಯ ಮುಖವನ್ನೂ ಪ್ರದರ್ಶಿಸಿದ್ದಾರೆ.

ಮಾಜಿ ಪ್ರಧಾನಿಗಳಾದ ಜವಹರಲಾಲ ನೆಹರು ಮತ್ತು ಇಂದಿರಾಗಾಂಧಿರವರು ಜನತೆಯನ್ನು ನೇರವಾಗಿ ಭೇಟಿಮಾಡಿ, ಅವರ ಸಮಸ್ಯೆಗಳನ್ನು ಖುದ್ದು ಆಲಿಸುತ್ತಿದ್ದರು. ಈ ಪರಂಪರೆ ವಾಜಪೇಯಿ ಕಾಲದಲ್ಲಿ ಮುಂದುವರಿದಿತ್ತಾದರೂ, ಕಾಲಾಂತರದಲ್ಲಿ ಸ್ಥಗಿತಗೊಂಡಿತ್ತು .

ಕರ್ನಾಟಕದಲ್ಲಿ ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಜನತಾ ದರ್ಶನ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+