ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರೆಭೀತಿ, ಜಲಾಶಯಗಳು ಸಂತೃಪ್ತಿ, ರೈತರಿಗೆ ಸುಖದುಃಖ ಸಮಪಾಲು

By Staff
|
Google Oneindia Kannada News

ನೆರೆಭೀತಿ, ಜಲಾಶಯಗಳು ಸಂತೃಪ್ತಿ, ರೈತರಿಗೆ ಸುಖದುಃಖ ಸಮಪಾಲು
ತುಂಬಿ ಹರಿಯುತ್ತಿದೆ ಕಾವೇರಿ, ಭಾಗಮಂಡಲ ಜಲಾವೃತ

ಬೆಂಗಳೂರು : ದಕ್ಷಿಣಕನ್ನಡ, ಮಂಗಳೂರು, ಉಡುಪಿ, ಕೊಡಗು, ಶಿವಮೊಗ್ಗ , ಹಾಸನ ಸೇರಿದಂತೆ ರಾಜ್ಯಾದ್ಯಂತ ಬಿರುಸು ಮಳೆ ಮುಂದುವರೆದಿದ್ದು , ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಧಾಕಾಕಾರ ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಮುಂದುವರೆದಿದೆ. ಕೊಡಗು ಜಿಲ್ಲೆಯಲ್ಲಿ ಆ.7ರವರೆಗೆ ರಜೆ ವಿಸ್ತರಿಸಲಾಗಿದೆ. ಕೊಡಗು ಹಾಗೂ ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾಗಿ ವಿದ್ಯುತ್‌ ತಂತಿಗಳು ಕುಸಿದುಬಿದ್ದಿದ್ದು , ಅನೇಕ ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿವೆ. ಉಡುಪಿ ಜಿಲ್ಲೆಯಲ್ಲಿ ಶಾಲಾ ಕಟ್ಟಡ ಸೇರಿದಂತೆ 50ಕ್ಕೂ ಹೆಚ್ಚು ಮನೆಗಳು ಕುಸಿದು ಅಪಾರ ನಷ್ಟ ಸಂಭವಿಸಿದೆ. ಕಳೆದ ಒಂದು ವಾರದಲ್ಲಿನ ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಉಂಟಾದ ನಷ್ಟ 70 ಲಕ್ಷ ರುಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಮಡಿಕೇರಿಯಲ್ಲಿ ಕಾವೇರಿ ತುಂಬಿ ಹರಿಯುತ್ತಿದ್ದು , ಭಾಗಮಂಡಲ ಜಲಾವೃತವಾಗಿದೆ. ಶಿವಮೊಗ್ಗ ಜಿಲ್ಲೆ ಐದಾರು ದಿನಗಳಿಂದ ಮಳೆಮಯವಾಗಿದ್ದು , ತುಂಗಾ ಹಾಗೂ ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೆಲವೆಡೆ ನೆರೆ ಭೀತಿ ತಲೆದೋರಿದ್ದು , ಅಡಿಕೆ ತೋಟಗಳು ಕೊಳೆರೋಗದ ಆತಂಕಕ್ಕೆ ತುತ್ತಾಗಿವೆ. ಶಿವಮೊಗ್ಗ-ಮಂಗಲೂರು ಹೆದ್ದಾರಿ ಮುಂಡಗದ್ದೆ-ತೂದೂರಿನಲ್ಲಿ ರಸ್ತೆ ನೀರಿನಿಂದ ತುಂಬಿದ್ದು , ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಉತ್ತರ ಕರ್ನಾಟಕದಲ್ಲೂ ಮಳೆಯ ಚಿತ್ರಗಳು ಜೋರಾಗಿವೆ. ಈ ಪ್ರದೇಶದ ಬಹುತೇಕ ಜಲಾಶಯಗಳು ತುಂಬಿವೆ. ಧಾರವಾಡದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X