ಪ್ರೇಂಜಿ, ನಾರಾಯಣಮೂರ್ತಿ ಜೊತೆ ಆ.10 ಧರ್ಮಸಿಂಗ್ ಮಾತು
ಪ್ರೇಂಜಿ,
ನಾರಾಯಣಮೂರ್ತಿ
ಜೊತೆ
ಆ.10
ಧರ್ಮಸಿಂಗ್
ಮಾತು
ಐಟಿ
ಹೀಟಿಗೆ
ಕರಗಿದ
ಸಿಂಗ್ರಿಂದ
‘ಧರ್ಮ’
ಸಂಧಾನಸಭೆಗೆ
ಕರೆ.
ಆಗಸ್ಟ್ 10ರಂದು ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆ ಕರೆದಿರುವ ವಿಷಯವನ್ನು ಮುಖ್ಯಮಂತ್ರಿ ಧರ್ಮಸಿಂಗ್ ಗುರುವಾರ (ಆ.5) ಸುದ್ದಿಗಾರರಿಗೆ ತಿಳಿಸಿದರು. ಈ ಸಭೆಯಲ್ಲಿ ಇನ್ಫೋಸಿಸ್ ರಾಜಗುರು ಎನ್.ಆರ್.ನಾರಾಯಣಮೂರ್ತಿ ಹಾಗೂ ಸಿಇಒ ನಂದನ್ ನೀಲೇಕಣಿ ಮತ್ತು ವಿಪ್ರೋತ್ತಮ ಅಜೀಂ ಪ್ರೇಂಜಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಧರ್ಮಸಿಂಗ್ ಹೇಳಿದರು.
ಕಳೆದ ತಿಂಗಳು ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ನಲ್ಲಿ ಸಾಫ್ಟ್ವೇರ್ ಕ್ಷೇತ್ರದ ಮೇಲಿನ ಮಾರಾಟ ತೆರಿಗೆಯನ್ನು ಶೇ.12ಕ್ಕೆ ಹೆಚ್ಚಿಸಿದ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿತ್ತು . ಇದೇ ಸಮಯದಲ್ಲಿ ರಾಜ್ಯ ಹಾಗೂ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿರುವುದರಿಂದ ತಮ್ಮ ಚಟುವಟಿಕೆಗಳನ್ನು ರಾಜ್ಯದಿಂದ ಹೊರಗೆ ವಿಸ್ತರಿಸುವುದಾಗಿ ವಿಪ್ರೋ ಹಾಗೂ ಇನ್ಫೋಸಿಸ್ ಧಮಕಿ ಹಾಕಿದ್ದವು. ಈ ಹಿನ್ನೆಲೆಯಲ್ಲಿ ಆ.10ರಂದು ಧರ್ಮಸಿಂಗ್ ಕರೆದಿರುವ ಸಭೆ ಕುತೂಹಲ ಕೆರಳಿಸಿದೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ