ಬಡ ಹೃದ್ರೋಗಿಗಳಿಗಾಗಿ ಸೇಂಟ್ಜಾನ್ಸ್ಆಸ್ಪತ್ರೆಯ ‘ಹೃದಯಸ್ಪಂದನ’
ಬಡ ಹೃದ್ರೋಗಿಗಳಿಗಾಗಿ ಸೇಂಟ್ಜಾನ್ಸ್ಆಸ್ಪತ್ರೆಯ ‘ಹೃದಯಸ್ಪಂದನ’
ಪೇಸ್ಮೇಕರ್, ಕೊರೊನರಿ ಮತ್ತು ಪೆರಿಫೆರಲ್ ಸ್ಟೆಂಟ್ಸ್ ಚಿಕಿತ್ಸೆ ಲಭ್ಯ
‘ಹೃದಯ ಸ್ಪಂದನ’ ಯೋಜನೆಯಡಿ ಬಡ ಹೃದ್ರೋಗಿಗಳಿಗೆ ಸಲಹೆ ಹಾಗೂ ಅಗತ್ಯ ಚಿಕಿತ್ಸೆ ನೀಡಲಾಗುವುದು. ಚಿಕಿತ್ಸೆ ಹಾಗೂ ಸಲಹೆ ಬಡರೋಗಿಗಳಿಗೆ ಉಚಿತವಾಗಿದ್ದು , ಅರ್ಹರಿಗೆ ರಿಯಾಯಿತಿ ದರದಲ್ಲೂ ಸಲಹೆ- ಚಿಕಿತ್ಸೆ ಲಭ್ಯವಿದೆ. ಪೇಸ್ಮೇಕರ್, ಕೊರೊನರಿ ಮತ್ತು ಪೆರಿಫೆರಲ್ ಸ್ಟೆಂಟ್ಸ್ ಇತ್ಯಾದಿ ಚಿಕಿತ್ಸೆಯೂ ಲಭ್ಯವಿದೆ.
ಹೃದ್ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಸೇಂಟ್ಜಾನ್ಸ್ ಆಸ್ಪತ್ರೆ ವಿವಿಧ ಮೂಲಗಳಿಂದ ನಿಧಿ ಸಂಗ್ರಹಿಸುತ್ತದೆ. ಚಿಕಿತ್ಸೆಯ ವೆಚ್ಚ ಹಾಗೂ ಇತರ ನಿರ್ವಹಣಾ ವೆಚ್ಚಗಳನ್ನು ಭರಿಸಲು ಬಡ ಹೃದ್ರೋಗಿಗಳ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications