ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರಸಿದ್ಧ ಯಾತ್ರಾಸ್ಥಳ ಇರ್ಪುವಿನ ರಾಮೇಶ್ವರ ದೇಗುಲದಲ್ಲಿ ಕಳ್ಳತನ

By Staff
|
Google Oneindia Kannada News

ಸುಪ್ರಸಿದ್ಧ ಯಾತ್ರಾಸ್ಥಳ ಇರ್ಪುವಿನ ರಾಮೇಶ್ವರ ದೇಗುಲದಲ್ಲಿ ಕಳ್ಳತನ
ಪಂಚಲೋಹ ಹಾಗೂ ಬೆಳ್ಳಿಯ ವಸ್ತುಗಳ ಅಪಹರಣ

ಮಡಿಕೇರಿ : ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಇರ್ಪುವಿನ ರಾಮೇಶ್ವರ ದೇಗುಲದಲ್ಲಿ ಇತ್ತೀಚೆಗೆ ಕಳ್ಳತನ ನಡೆದಿದ್ದು , ವಿಗ್ರಹಗಳು ಸೇರಿದಂತೆ ಅನೇಕ ಬೆಲೆಬಾಳುವ ವಸ್ತುಗಳನ್ನು ಕಳ್ಳರು ಅಪಹರಿಸಿದ್ದಾರೆ.

ಇರ್ಪು ರಾಮೇಶ್ವರ ದೇಗುಲದಲ್ಲಿ ಜುಲೈ 26ರ ಸೋಮವಾರ ಕಳ್ಳತನ ನಡೆದಿದೆ. ಪಂಚಲೋಹದ ವಿಗ್ರಹಗಳು, ಬೆಳ್ಳಿಯ ಪ್ರಭಾವಳಿ ಸೇರಿದಂತೆ ವಿವಿಧ ವಸ್ತುಗಳನ್ನು ಕಳ್ಳಲು ಕದ್ದೊಯ್ದಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು , ಡಿಎಸ್ಪಿ ಅಶೋಕ್‌ ಅನ್ವೇಕರ್‌ ದೇಗುಲಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಲಕ್ಷ್ಣಣತೀರ್ಥ ನದಿಗೆ ಸನಿಹದಲ್ಲಿರುವ ಇರ್ಪು ರಾಮೇಶ್ವರ ದೇಗುಲ ಭಕ್ತರನ್ನು ಮಾತ್ರವಲ್ಲದೆ ತನ್ನ ಸುಂದರ ಪರಿಸರದಿಂದ ಸೌಂದರ್ಯೋಪಾಸಕರನ್ನೂ ಸೆಳೆಯುತ್ತಿದೆ. ಪ್ರತಿದಿನ ನೂರಾರು ಪ್ರವಾಸಿಗರು ಇರ್ಪುವಿಗೆ ಭೇಟಿ ನೀಡುವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X