‘ಅಮ್ಮನ ಮಂದಿರ’ ಕ್ಕಾಗಿ ಮಾವಿನ ತೋಪಿಗೆ ಕೊಡಲಿ ಗುರಿಯಿಟ್ಟರು !
‘ಅಮ್ಮನ ಮಂದಿರ’ ಕ್ಕಾಗಿ ಮಾವಿನ ತೋಪಿಗೆ ಕೊಡಲಿ ಗುರಿಯಿಟ್ಟರು !
ದೇಗುಲ ಕಟ್ಟಲೆಂದು ದೈವಸ್ವರೂಪಿಗಳಾದ ಮರಗಳ ಕಡಿಯುವುದು ಯಾವ ನ್ಯಾಯ ?
- ದಟ್ಸ್ಕನ್ನಡ ಬ್ಯೂರೊ
ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲೊಂದು ಹಳ್ಳಿ. ಅಡವಿಗೊಲ್ಲಾವರ ಎಂದು ಹೆಸರು. ಇಲ್ಲಿನ ಗುಂಡುತೋಪು ಪ್ರದೇಶವೆಂದರೆ ಅದು ಮಾವಿನ ಮರಗಳ ತೋಪು. ಮರಗಳೆಂದರೆ ಸಣ್ಣ ಮರಗಳಲ್ಲ ; ವಿಶಾಲವಾಗಿ ಕೊಂಬೆರೆಂಬೆ ಚಾಚಿಕೊಂಡ ಬೃಹತ್ ಮರಗಳು. ಇಂಥದೊಂದು ತೋಪಿನಲ್ಲೀಗ ಅನೇಕ ಮರಗಳು ಮಾಯವಾಗಿವೆ. ಎಲ್ಲವೂ ಸಪ್ಪಲಮ್ಮ ದೇವಿಯ ಕೃಪೆಗಾಗಿ.
ಸಪ್ಪಲಮ್ಮ ದೇವತೆಗೊಂದು ಗುಡಿಯ ಕಟ್ಟಬೇಕು ಎನ್ನುವ ವಿಚಾರ ಗ್ರಾಮಸ್ಥರ ತಲೆಗೆ ಯಾವಾಗ ಹೊಳೆಯಿತೋ ಏನೋ, ಮಾವಿನ ತೋಪಿಗೆ ಗ್ರಹಚಾರ ವಕ್ಕರಿಸಿದ್ದೇ ಆಗ. ಮಾವಿನ ಮರಗಳನ್ನು ಕಡಿದು ಮಾರಿ, ಬಂದ ಹಣದಲ್ಲಿ ದೇವಸ್ಥಾನ ಕಟ್ಟುವುದೆಂದು ಗ್ರಾಮಸ್ಥರು ತೀರ್ಮಾನಿಸಿದರು. ಸರಿ ಹಸಿರುಮೇಧವೂ ಪ್ರಾರಂಭವಾಯಿತು. ಸುಮಾರು 30 ಮರಗಳನ್ನು ಬುಡಮಟ್ಟ ಕಡಿದು ಮಾರಿದ್ದೂ ಆಯಿತು. ಇನ್ನಷ್ಟು ಮರಗಳಿಗೆ ಕೊಡಲಿ ಗುರಿ ಇಟ್ಟಿದ್ದೂ ಆಯಿತು. ಆಗ ಅಡ್ಡಬಂದದ್ದು ಅರಣ್ಯ ಇಲಾಖೆ.
ಸದ್ಯಕ್ಕೆ ತೋಪಿನಲ್ಲಿ ಉಳಿದಿರುವುದು 24 ಮರಗಳು ಮಾತ್ರ!
ಹಳ್ಳಿಯ ಮಾವಿನ ಮರಗಳು ಪಕ್ಷಿಗಳಿಗೆ ಗೂಡು ಒದಗಿಸಿದ್ದವು. ಇದೇ ಮರಗಳ ನೆರಳಿನಲ್ಲಿ ಹಾದಿಹೋಕರು ದಣಿವು ಕಳಕೊಂಡು ಮುಂದೆ ಸಾಗುತ್ತಿದ್ದರು. ಮಾವಿನ ಸುಗ್ಗಿಯಲ್ಲಂತೂ ತೋಪಿನಲ್ಲಿ ಹಬ್ಬದ ವಾತಾವರಣ. ಹಳ್ಳಿಯ ಯಾವ ಮನೆಯಲ್ಲಿ ಸಂಭ್ರಮ ಜರುಗಿದರೂ ಇದೇ ತೋಪಿನ ಮರಗಳ ಎಲೆಗಳ ತೋರಣವೇ ಆಗಬೇಕಿತ್ತು . ಹೀಗಿದ್ದೂ ತೋಪಿನ ನಾಶಕ್ಕೆ ಜನ ಕೊಡಲಿ ಎತ್ತಿದರು.
ಅರಣ್ಯ ಇಲಾಖೆ ಗ್ರಾಮಸ್ಥರ ಕೊಡಲಿಗೆ ಸದ್ಯಕ್ಕೆ ತಡೆಯಾಡ್ಡಿದೆ. ಆದರೆ, ಉಳಿದ 24 ಮರಗಳನ್ನು ಕಡಿದೇ ತೀರಲು ಹಳ್ಳಿಗರು ನಿರ್ಧರಿಸಿದ್ದಾರೆ, ಅದಕ್ಕಾಗಿ ಸ್ಥಳೀಯ ರಾಜಕಾರಣಿಗಳ ನೆರವು ಪಡೆಯುತ್ತಿದ್ದಾರೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮರಗಳನ್ನು ದೇವತೆಗಳೆಂದು ನಮಮ ಪೂರ್ವಿಕರು ಪೂಜಿಸುತ್ತಿದ್ದರು. ಮತ್ತೊಂದು ದೇವರಿಗೆ ದೇಗುಲ ಕಟ್ಟಲೆಂದು ದೈವಸ್ವರೂಪಿಗಳಾದ ಮರಗಳನ್ನು ಕಡಿಯುವುದು ಯಾವ ನ್ಯಾಯ ? ಎಂದು ಅರಣ್ಯಇಲಾಖೆಯ ರೇಂಜ್ ಆಫೀಸರ್ ಎಸ್.ವಿ.ಕಂಬಳ್ಳಿ ಧರ್ಮಪ್ರಶ್ನೆ ಎತ್ತಿದ್ದಾರೆ. ಅವರ ಪ್ರಯತ್ನಗಳಿಗೆ ಜಯವಾಗಲಿ. ಪರಿಸರವಾದಿಗಳ ಕೂಗು ಅರಣ್ಯರೋದನ ಆಗದಿರಲಿ.
ತಾಯಿ ಸಪ್ಪಲಮ್ಮ , ನಿನ್ನ ಭಕ್ತರಿಗಿಷ್ಟು ಬುದ್ಧಿ ಕೊಡು !
ಮುಖಪುಟ / ವಾಟ್ಸ್ ಹಾಟ್
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications