ಬಜೆಟ್ 2004-05 : ರೈತರಿಗೆ ಶುಕ್ರದೆಸೆ, ‘ಗಣಕ ಮಿತ್ರ’ರಿಗೆ ಶನಿದೆಸೆ
ಬಜೆಟ್ 2004-05 : ರೈತರಿಗೆ ಶುಕ್ರದೆಸೆ, ‘ಗಣಕ ಮಿತ್ರ’ರಿಗೆ ಶನಿದೆಸೆ
ಕಂಪ್ಯೂಟರ್ ದುಬಾರಿ, ಮನರಂಜನಾ ತೆರಿಗೆ ಕಡಿತ, ರೈತರಿಗೆ ಶೇ.6ರ ದರದಲ್ಲಿ ಬಡ್ಡಿ
ಉತ್ತರ ಕರ್ನಾಟಕದ ಪ್ರಗತಿಗೆ ಹಾಗೂ ಸಾಮಾಜಿಕ ಅಸಮತೋಲನಕ್ಕೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ 7170 ಕೋಟಿ ರುಪಾಯಿಗಳನ್ನು ಆಯವ್ಯಯದಲ್ಲಿ ಒದಗಿಸಲಾಗುವುದು ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಜುಲೈ 19ರ ಸೋಮವಾರ ಸಿದ್ಧರಾಮಯ್ಯ ಬಜೆಟ್ ಮಂಡಿಸಿದರು.
ರೈತಪರ ನೀತಿಯನ್ನು ಪುನರುಚ್ಛರಿಸಿರುವ ಸರ್ಕಾರ, 2004-05ರ ಸಾಲಿನಲ್ಲಿ 840 ಕೋಟಿ ರುಪಾಯಿಗಳನ್ನು ಕೃಷಿ ವಲಯಕ್ಕೆ ಮೀಸಲಿಟ್ಟಿದೆ. ಶೇ.6ರ ದರದಲ್ಲಿ ಕೃಷಿಕರಿಗೆ ಸಾಲ ನೀಡಲು 60 ಕೋಟಿ ರುಪಾಯಿಗಳ ನಿಧಿ ಸ್ಥಾಪಿಸಲಾಗುವುದು ಎಂದು ಸಿದ್ಧರಾಮಯ್ಯ ಬಜೆಟ್ ಭಾಷಣದಲ್ಲಿ ತಿಳಿಸಿದರು.
2004-05ರ ಸಾಲಿನಲ್ಲಿ ಒಟ್ಟು 32065.99 ಕೋಟಿ ರುಪಾಯಿ ಸಂಗ್ರಹವನ್ನು ನಿರೀಕ್ಷಿಸಲಾಗಿದೆ. ವೆಚ್ಚದ ಪ್ರಮಾಣ ಅಂದಾಜು 31591.88 ಕೋಟಿ. ಎಂಟು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಉಳಿಕೆ ಬಜೆಟ್ ಮಂಡಿಸಲಾಗಿದ್ದು , 72.83 ಕೋಟಿ ರುಪಾಯಿ ಉಳಿಕೆಯನ್ನು ಸಿದ್ಧರಾಮಯ್ಯ ತೋರಿಸಿದ್ದಾರೆ.
ಬಜೆಟ್ನ ಮುಖ್ಯಾಂಶಗಳು :
- ಆರೋಗ್ಯ ಮತ್ತು ಪೌಷ್ಟಿಕಾಂಶ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಪದ್ಧತಿಯ ಮೇಲ್ದರ್ಜೆಗೆ 765 ಕೋಟಿ ರುಪಾಯಿ ಒದಗಿಸಲಾಗುವುದು. ಯಶಸ್ವಿನಿ ಯೋಜನೆಯನ್ನು ಮತ್ತಷ್ಟು ಬಲಗೊಳಿಸಲಾಗುವುದು.
- ನೇಕಾರರಿಗಾಗಿ 20 ಕೋಟಿ ರುಪಾಯಿ ಪ್ಯಾಕೇಜ್.
- ಸಣ್ಣ ಕೈಗಾರಿಕೆಗಳಿಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಹಣಕಾಸು ನಿಗಮದ ಅನುದಾನ 65 ಕೋಟಿ ರುಪಾಯಿಗೆ ಹೆಚ್ಚಳ.
- ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳವರು ತಮ್ಮ ವೃತ್ತಿ ನೈಪುಣ್ಯ ಹೆಚ್ಚಿಸಿಕೊಳ್ಳಲು ಹಾಗೂ ಸ್ವಯಂ ಉದ್ಯೋಗ ಸ್ಥಾಪಿಸಲು 20 ಕೋಟಿ ರುಪಾಯಿ ಮೀಸಲು.
- ಮೈಸೂರು ಹಾಗೂ ಗುಲ್ಬರ್ಗಾದಲ್ಲಿ ವಾಯುನೆಲೆಗಳ ಸ್ಥಾಪನೆಯ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿ . ಇದಕ್ಕಾಗಿ 5 ಕೋಟಿ ರುಪಾಯಿ ಮೀಸಲಿಡುವ ಉದ್ದೇಶ.
- ಜೈವಿಕ ತಂತ್ರಜ್ಞಾನ ಹಾಗೂ ಆನ್ವಯಿಕ ಬಯೋಇನ್ಫಾರ್ಮಟಿಕ್ಸ್ ಸಂಸ್ಥೆಗಾಗಿ 10 ಕೋಟಿ ರುಪಾಯಿ. ಜೈವಿಕ ತಂತ್ರಜ್ಞಾನ ಯೋಜನೆಗಳಿಗೆ ಸರ್ವ ಬೆಂಬಲ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ರಾಜ್ಯ ಪ್ರಕಾಶಿಸುವಂತಾಗಲು ಕ್ರಮ.
- ಉತ್ತರ ಕರ್ನಾಟಕದ ಧಾರವಾಡದಲ್ಲಿ ವಿಜ್ಞಾನ ನಗರಿಯ ಅಭಿವೃದ್ಧಿ .
- ಗುಲ್ಬರ್ಗಾದ ಜೇವರ್ಗಿಯಲ್ಲಿ ಆಹಾರ ಪಾರ್ಕ್.
- ರಕ್ಷಣಾ ಸೇವೆಗಳಿಗೆ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಪ್ರೋತ್ಸಾಹಿಸಲು ಕೊಡಗಿನಲ್ಲಿ ಸೈನಿಕ ಶಾಲೆ ಸ್ಥಾಪನೆ. ಇದಕ್ಕಾಗಿ 1 ಕೋಟಿ ರುಪಾಯಿ ಮೀಸಲು.
- ಹೆಚ್ಚುವರಿ ಸಂಪನ್ಮೂಲಗಳ ಕ್ರೋಢೀಕರಣಕ್ಕಾಗಿ ಪ್ರಸ್ತುತ ಐಷಾರಾಮಿ ವಸ್ತುಗಳಿಗೆ ನೀಡಲಾಗಿರುವ ಶೇ.8ರ ರಿಯಾಯಿತಿ ಹಾಗೂ ರಕ್ಷಣಾ ಪಡೆಗಳ ಸ್ಟೋರ್ಗಳಲ್ಲಿನ ವಸ್ತುಗಳಿಗೆ ನೀಡುತ್ತಿರುವ ಶೇ.4ರ ರಿಯಾಯಿತಿ ರದ್ದು .
- ಸರಿಯಾದ ಪ್ರಮಾಣದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗವನ್ನು ಹೊಂದುವುದು ಸರ್ಕಾರದ ಆದ್ಯತೆಗಳಲ್ಲೊಂದು. ಹೀಗಾಗಿ ಎಲ್ಲ ಇಲಾಖೆಗಳ ಪುನರ್ರಚನೆ ಹಾಗೂ ವಿಆರ್ಎಸ್ ಯೋಜನೆ ಮುಂದುವರಿಯಲಿದೆ.
- ಹೊಸ ನೇಮಕಾತಿಗಳ ಸ್ಥಗಿತ ಮುಂದುವರಿಕೆ.
- ಕಂಪ್ಯೂಟರ್ ಸಾಫ್ಟ್ವೇರ್ ಮೇಲಿನ ತೆರಿಗೆ ಶೇ.4ರಿಂದ 12ಕ್ಕೆ ಹೆಚ್ಚಳ.
- ಡೀಸೆಲ್, ಪಡಿತರೇತರ ಸೀಮೆಎಣ್ಣೆ , ಸಿಮೆಂಟ್, ಗಾಂಜಾ, ಭಂಗಿ ಹಾಗೂ ಇನ್ನಿತರ ನಿಕೋಟಿನ್ ಯುಕ್ತ ವಸ್ತುಗಳು, ಅಡುಗೆಮನೆ ವಸ್ತುಗಳು, ವನಸ್ಪತಿ, ಸಿಗರೇಟ್ ಫಿಲ್ಟರ್ ಮತ್ತಿತರ ವಸ್ತುಗಳ ಮೇಲಿನ ತೆರಿಗೆ ಹೆಚ್ಚಳ.
- ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಪಡಿತರಚೀಟಿದಾರರಿಗೆ ಕೇಜಿಗೆ 3 ರುಪಾಯಿಯಂತೆ ಮಾಸಿಕ 20 ಕೇಜಿ ಅಕ್ಕಿ ಹಾಗೂ 5 ಕೇಜಿ ಗೋಧಿ ನೀಡಲಾಗುವುದು.
- ಶ್ರೀರಂಗಪಟ್ಟಣ, ಬಿಜಾಪುರ, ಗುಲ್ಬರ್ಗಾ, ಕಿತ್ತೂರುಗಳನ್ನು ಪರಂಪರೆ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು 3 ಕೋಟಿ ರುಪಾಯಿ.
- ಬೆಳೆ ವಿಮೆಗೆ 241 ಕೋಟಿ ರು. ಹೆಚ್ಚುವರಿ ಅನುದಾನ.
- ಕೃಷಿ ಉತ್ಪನ್ನಗಳ ಬೆಲೆ ಕುಸಿತ ತಡೆಗೆ ಆವರ್ತನ ನಿಧಿಗೆ 100 ಕೋಟಿ ರು.
- ಮಣ್ಣಿನ ರಕ್ಷಣೆ ಹಾಗೂ ಜಲ ಸಂಪನ್ಮೂಲ ರಕ್ಷಣೆಗೆ 100 ಕೋಟಿ.
- ಕೆರೆ ನಿರ್ವಹಣೆ ಯೋಜನೆಗೆ 670 ಕೋಟಿ ರು., ಗ್ರಾಮೀಣ ನೀರು ಪೂರೈಕೆ ಕಾಮಗಾರಿಗಳಿಗೆ 1035 ಕೋಟಿ ರು.
- ಸಿನಿಮಾದ ಮನರಂಜನಾ ತೆರಿಗೆ ಶೇ.70ರಿಂದ 40ಕ್ಕೆ ಕಡಿತ.
- ಶೇ.6ರ ಬಡ್ಡಿಯಲ್ಲಿ ಕೃಷಿಕರಿಗೆ ಸಾಲ ನೀಡಿಕೆ.
- ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ 20 ಕೋಟಿ ಮೀಸಲು.
- 2005ರ ಏಪ್ರಿಲ್ 1ರಿಂದ ವ್ಯಾಟ್ ಜಾರಿ.
ವಾರ್ತಾ ಸಂಚಯ
‘ಕರ್ನಾಟಕ ಆನ್ಲೈನ್ ಲಾಟರಿ ಮುಕ್ತ ’ ! ರಾಜ ್ಯಬಜೆಟ್ ಘೋಷಣೆ
ಮುಖಪುಟ / ಧರ್ಮ-ಕಾರಣ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications