ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವೇಶ್ವರಯ್ಯ ಟ್ರಸ್ಟ್‌ನಿಂದ ಸಾಹಿತ್ಯ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ

By Staff
|
Google Oneindia Kannada News

ವಿಶ್ವೇಶ್ವರಯ್ಯ ಟ್ರಸ್ಟ್‌ನಿಂದ ಸಾಹಿತ್ಯ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ
ಪುಸ್ತಕ ಕಳುಹಿಸಲು ಕೊನೆಯ ದಿನಾಂಕ ಜುಲೈ 31

ಬೆಂಗಳೂರು : ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಪ್ರತಿಷ್ಠಾನ 2004ನೇ ಸಾಲಿನ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿಗಳಿಗಾಗಿ ಪುಸ್ತಕಗಳನ್ನು ಆಹ್ವಾನಿಸಿದೆ.

1994ರಿಂದ ಈವರೆಗೆ ಪ್ರಕಟವಾದ ಪುಸ್ತಕಗಳನ್ನು ಪ್ರಶಸ್ತಿಗಾಗಿ ಕಳುಹಿಸಬಹುದು. ಆಯ್ಕೆಯಾದ 5 ಕೃತಿಗಳ ಲೇಖಕರಿಗೆ ತಲಾ 5 ಸಾವಿರ ರುಪಾಯಿ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.

ವಿವರಗಳನ್ನು ಗಮನಿಸಿ :

  • ಅನ್ಯ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ಯಾವುದೇ ಪ್ರಕಾರದ ಕೃತಿಗಳನ್ನು ಕಳುಹಿಸಬಹುದು. ಪುಸ್ತಕದ 3 ಪ್ರತಿಗಳನ್ನು ಕುಹಿಸಬೇಕು.
  • ಹಸ್ತಪ್ರತಿಗಳಿಗೆ ಅವಕಾಶವಿಲ್ಲ .
  • ಕೃತಿಗಳೊಂದಿಗೆ ಸ್ವ ವಿವರ ಹಾಗೂ ಎರಡು ಫೋಟೊ ಕಳುಹಿಸಿ.
  • 10ನೇ ತರಗತಿಯಾಳಗೆ ಇದ್ದಾಗಲೇ ಕೃತಿಗಳನ್ನು ಪ್ರಕಟಿಸಿರುವ 20 ವರ್ಷ ಮೇಲ್ಪಟ್ಟ ಲೇಖಕರೂ ಕೂಡ ತಮ್ಮ ಪುಸ್ತಕಗಳನ್ನು ಕಳುಹಿಸಬಹುದು. ಆಯ್ಕೆಯಾದ ಕೃತಿಗಳಿಗೆ 2 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಲಾಗುವುದು.
  • ಪುಸ್ತಕ ಕಳುಹಿಸಲು ಕೊನೆ ದಿನ- ಜುಲೈ 31, 2004.
ಪುಸ್ತಕ ಕಳುಹಿಸಬೇಕಾದ ಹಾಗೂ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ :

ರಮೇಶ ಸುರ್ವೆ, ಅಧ್ಯಕ್ಷರು, ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಪ್ರತಿಷ್ಠಾನ, ನಂ.468, 1ನೇ ಮಹಡಿ, 13ನೇ ಮುಖ್ಯರಸ್ತೆ , 3ನೇ ಹಂತ, ಮಂಜುನಾಥ ನಗರ, ಬೆಂಗಳೂರು- 560010. ದೂರವಾಣಿ - (080) 23235970.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X