ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟಾಂಪಿಟ್‌ ಅಧಿಕಾರಿಗಳಿಂದ ದಾಖಲೆಗಳ ನಾಶ : ಸಂಗ್ರಾಮ್‌ ಆರೋಪ

By Staff
|
Google Oneindia Kannada News

ಸ್ಟಾಂಪಿಟ್‌ ಅಧಿಕಾರಿಗಳಿಂದ ದಾಖಲೆಗಳ ನಾಶ : ಸಂಗ್ರಾಮ್‌ ಆರೋಪ
ಮಾಜಿ ಮುಖ್ಯಮಂತ್ರಿ ಕೃಷ್ಣ ಮತ್ತು ಖರ್ಗೆಯತ್ತ ಮಾಜಿ ಎಸಿಪಿ ಬೊಟ್ಟು

ಬೆಂಗಳೂರು : ನಕಲಿ ಛಾಪಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿತರಾಗಿರುವ ಮಾಜಿ ಎಸಿಪಿ ಸಂಗ್ರಾಮ್‌ಸಿಂಗ್‌ ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಮತ್ತು ಆಗಿನ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಅಣತಿಯಂತೆ ಸ್ಟಾಂಪಿಟ್‌ ಅಧಿಕಾರಿಗಳಾದ ಎಜಿಡಿಪಿ ಶ್ರೀಕುಮಾರ್‌ ಮತ್ತು ಡಿಐಐ ಔರಾದಕರ್‌ ಅವರು ಛಾಪಾ ಕಾಗದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾಶಮಾಡಿದ್ದಾರೆ ಎಂದು ಸಂಗ್ರಾಮ್‌ಸಿಂಗ್‌ ಅವರು ಮೊದಲ ಎಸಿಎಮ್‌ಎಮ್‌ ನ್ಯಾಯಾಧೀಶರ ಮುಂದೆ ಮಂಗಳವಾರ ಹೇಳಿಕೆ ನೀಡಿದರು.

ವೀರಪ್ಪನ್‌ನಿಂದ ಅಪಹರಣಕ್ಕೊಳಗಾಗಿದ್ದ ರಾಜಕುಮಾರ್‌ರನ್ನು ಬಿಡಿಸಿಕೊಂಡು ಬರಲು ಕೃಷ್ಣ ಸರ್ಕಾರ 20 ಕೋಟಿ ಹಣ ನೀಡಿದೆ ಎಂದು ಮೊದಲ ಬಾಂಬ್‌ ಇಟ್ಟಿದ್ದ ಸಂಗ್ರಾಮ್‌ ಸಿಂಗ್‌ ನ್ಯಾಯಾಧೀಶ ವಿ.ಎಚ್‌. ಸಾಂಬ್ರಾಣಿಯವರ ಮುಂದೆ ಸ್ವಇಚ್ಛೆಯಿಂದ ದಾಖಲೆ ನಾಶಪಡಿಸಿದ ಬಗ್ಗೆ ಹೇಳಿಕೆ ನೀಡಿದರು.

ಕೃಷ್ಣ ಮತ್ತು ಖರ್ಗೆಯವರನ್ನು ಛಾಪಾಕೂಪದಿಂದ ಪಾರುಮಾಡಿದರೆ ಬೆಂಗಳೂರಿನ ಪೊಲೀಸ್‌ ಆಯುಕ್ತ ಹುದ್ದೆ ನೀಡುವುದಾಗಿ ಶ್ರೀಕುಮಾರ್‌ಗೆ ಭರವಸೆ ನೀಡಲಾಗಿತ್ತು. ಈ ಆಮಿಷಕ್ಕೊಳಗಾಗಿ ಶ್ರೀಕುಮಾರ್‌ ಅವರು ದಾಖಲೆಗಳನ್ನು ಸರ್ವನಾಶ ಮಾಡಿದ್ದಾರೆ. ಅಪ್ರಯೋಜಕ ದಾಖಲೆಗಳನ್ನು ಸಿಬಿಏಗೆ ನೀಡಲಾಗಿದೆ ಎಂದು ಸಂಗ್ರಾಮ್‌ಸಿಂಗ್‌ ತಿಳಿಸಿದರು.

ಛಾಪಾಕೂಪದಲ್ಲಿ ಭಾಗಿಯಾಗಿರುವ ರಾಜಕಾರಣಿಗಳ ಬಗ್ಗೆ ಶ್ರೀಕುಮಾರ್‌ ಮತ್ತು ಔರಾದಕರ್‌ ಅವರಿಗೆ ತಿಳಿಸಿದಾಗ ತಮ್ಮನ್ನು ಬೆದರಿಸಲಾಯಿತು ಎಂದು ಅವರು ತಿಳಿಸಿದರು.

ಮಾನಸಿಕವಾಗಿ ಸ್ವಸ್ಧ : ಮಾನಸಿಕವಾಗಿ ಅಸ್ವಸ್ಥರಾಗಿದ್ದು, ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆಯನ್ನು ಸಂಗ್ರಾಮ್‌ ಸಿಂಗ್‌ ಸಾರಾಸಗಟಾಗಿ ತಳ್ಳಿಹಾಕಿದ್ದು, ತಾವು ಸ್ವಸ್ಥರಾಗಿರುವುದಾಗಿ ನ್ಯಾಯಾಧೀಶರಿಗೆ ತಿಳಿಸಿದರು.

ವಿಪರೀತ ಛಳಿ ಇದ್ದರೂ ಸಿಬಿಐ ಅಧಿಕಾರಿಗಳು ತಮ್ಮನ್ನು ಕೇವಲ ಸುದ್ದಿ ಪತ್ರಿಕೆಗಳ ಮೇಲೆ ಮಲಗಿಸಿದ್ದರು ಮತ್ತು ಹೊದ್ದುಕೊಳ್ಳಲು ತೆಳ್ಳಗಿನ ಹೊದಿಕೆ ನೀಡಿದ್ದರೆಂದು ಅವರು ಆರೋಪಿಸಿದರು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X