ಹಾಸ್ಯ- ಪಾಯಸ : ಹೀಗೊಂದು ಹಬ್ಬ
ಹಾಸ್ಯ- ಪಾಯಸ : ಹೀಗೊಂದು ಹಬ್ಬ
ಹಾಸ್ಯ ಆಮೋದಕರ ಪಾಯಸ ರುಚಿಕರ; ಹಬ್ಬಗಳಿಲ್ಲದ ಆಷಾಢದ ಒಂದು ಭಾನುವಾರ (ದಿನಾಂಕ 18.7.2004)ಹಾಸ್ಯ ಪಾಯಸ ಹಬ್ಬಕ್ಕೆ ಆಸಕ್ತರಿಗೆಲ್ಲ ಆಹ್ವಾನ.
- ಪ್ರಕಾಶ ಸಾಗರ
[email protected]
ಅಂದು ನಾಡಿನ ಪ್ರಸಿದ್ಧ ಹಾಸ್ಯ ಸಾಹಿತಿಗಳ ವಾಗ್ಮಿಗಳ ನಗೆ ಹಬ್ಬ ನಡೆಯಲಿದೆ. ಮಾಸ್ಟರ್ ಹಿರಣ್ಣಯ್ಯ, ವಿಶ್ವೇಶ್ವರ ಭಟ್ಟ, ಡಾ. ಗಿರಿಧರ ಕಜೆ, ಡಾ. ಬಿ.ಆರ್. ಲಕ್ಷ್ಮಣ ರಾವ್, ಎಂ. ಎನ್. ವ್ಯಾಸರಾವ್, ವೈ.ವಿ. ಗುಂಡೂರಾವ್, ಡಾ. ಎಂ.ಎಚ್. ಶ್ರೀಕಂಠಯ್ಯ ಮುಂತಾದವರು ರಸಿಕರಿಗೆ ಹಾಸ್ಯರಸಾಯನವನ್ನು ಉಣಬಡಿಸಿದರೆ, ನಗರದಲ್ಲಿ ಸಾತ್ವಿಕ ಅಡುಗೆಗೆ ಪ್ರಸಿದ್ಧವಾದ ಮಹೇಶ ಹೆಗಡೆಯ ಪಾಕಶಾಸ್ತ ್ರತಂಡ ಹವ್ಯಕರ ಮೂವತ್ತೆರಡು ಬಗೆಯ ವಿಶಿಷ್ಟ ಪಾಯಸಮಹಾಮೇಳವನ್ನು ನಡೆಸಲಿದ್ದಾರೆ. ಹಲಸಿನ ಹಣ್ಣಿನ, ಬಾಳೆಹಣ್ಣಿನ, ತರಕಾರಿಗಳ, ಗಡ್ಡೆಗೆಣಸುಗಳ, ಬೇಳೆಕಾಳುಗಳ, ಅಕ್ಕಿಯ, ಮಾವಿನ ಹಣ್ಣಿನ, ಖರ್ಜೂರದ, ಶಾವಿಗೆಯ ಪಾಯಸಗಳು ಮೇಳೈಸಲಿವೆ. ಇವುಗಳೊಂದಿಗೆ ಚಪ್ಪರಿಸುವ ಉಪ್ಪಿನಕಾಯಿ ಸಂಪೂರ್ಣ ಉಚಿತವಾಗಲಿದೆ. ಆರೋಗ್ಯಕ್ಕೆ ಹಾನಿಯನ್ನೆಸಗದ ಪಾಯಸಗಳನ್ನು ಬಾಯಿ ಸವಿಗಾದರೆ, ಹಾಸ್ಯ ರಸಾಯನ ಬುದ್ಧಿಗೌತಣವಾಗಲಿದೆ. ಪಾಯಸದ ಸಂಗಾತಿಗಳಾಗಿ ಮಧ್ಯಾಹ್ನಕ್ಕೆ ಬೇಳೆಬಾತು, ಮೊಸರನ್ನ, ಪಕೋಡಾ, ದೋಸೆಗಳು ಸೇರಲಿವೆ. ನಗು ಆರೋಗ್ಯ ವರ್ಧಕ; ಹಾಗೆ ಪಾಯಸ ಆರೋಗ್ಯಕ್ಕೆ ಆಹಾರ. ಹಬ್ಬಗಳಿಲ್ಲದ ಆಷಾಢದ ಒಂದು ಭಾನುವಾರ ಹಾಸ್ಯ ಪಾಯಸ ಹಬ್ಬಕ್ಕೆ ಆಸಕ್ತರಿಗೆಲ್ಲ ಆಹ್ವಾನ. ಕತ್ತಲಾಗತ್ತಿದ್ದಂತೆ ತೆಂಕು ತಿಟ್ಟಿನ ಯಕ್ಷಗಾನ ಕಳೆಕಟ್ಟಲಿದೆ.
ಹೆಚ್ಚಿನ ಮಾಹಿತಿಗಾಗಿ: 26727510/ 9448061678 (ಶ್ರೀರಾಮಾಶ್ರಮ, ಗಿರಿನಗರ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications