ರೋಷನ್ಗಾಗಿ ನಾನು ಬಲಿ- ಸಂಗ್ರಾಂ ; ಅಪರಾಧಿ ನಾನಲ್ಲ - ಖರ್ಗೆ
ರೋಷನ್ಗಾಗಿ ನಾನು ಬಲಿ- ಸಂಗ್ರಾಂ ; ಅಪರಾಧಿ ನಾನಲ್ಲ - ಖರ್ಗೆ
ಸಂಗ್ರಾಂಸಿಂಗ್ರ ಆರೋಪಗಳನ್ನು ಸಾರಾ ಸಗಟಾಗಿ ನಿರಾಕರಿಸಿದ ಮಾಜಿ ಗೃಹ ಸಚಿವ
ರೋಷನ್ಬೇಗ್ರನ್ನು ಪ್ರಕರಣದಿಂದ ಬಚಾವ್ ಮಾಡಲು ತಮ್ಮನ್ನು ಬಲಿಪಶುವನ್ನಾಗಿ ಮಾಡಲಾಯಿತು. ಆಗಿನ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹಾಗೂ ಅವರ ಅಳಿಯ ಸಿದ್ಧಾರ್ಥ, ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ.ಶಿವಕುಮಾರ್, ಹಿರಿಯ ಕಾಂಗ್ರೆಸ್ಸಿಗ ಗುಲಾಮ್ ನಬಿ ಆಜಾದ್ ತಮ್ಮ ಮೇಲೆ ಗೂಬೆ ಕೂರಿಸಿದರು ಎಂದು ಸಂಗ್ರಾಂಸಿಂಗ್ ಗುರುವಾರ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ಛಾಪಾ ಪಾಪ ಹಗರಣದಲ್ಲಿ ತೆಲಗಿಯಾಂದಿಗೆ ಸಂಪರ್ಕ ಹೊಂದಿರುವ ಶಂಕೆಯಲ್ಲಿ ಸಂಗ್ರಾಂರನ್ನು ಸಿಬಿಐ ಬಂಧಿಸಿ, ಗುರುವಾರ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರು ಪಡಿಸಿತ್ತು .
ಸಂಗ್ರಾಂಸಿಂಗ್ರ ಹೇಳಿಕೆಯ ಬಗ್ಗೆ ಜುಲೈ 9 ರ ಶುಕ್ರವಾರ ಸ್ಪಷ್ಟೀಕರಣ ನೀಡಿದ ಖರ್ಗೆ- ಸಂಗ್ರಾಂಸಿಂಗ್ರ ಹೇಳಿಕೆ ಸತ್ಯದೂರವಾಗಿದ್ದು , ನಿವೃತ್ತ ಅಧಿಕಾರಿಯ ಹತಾಶೆಯ ನುಡಿಗಳಾಗಿವೆ ಎಂದಿದ್ದಾರೆ.
ತಾವು ಗೃಹ ಸಚಿವರಾಗಿದ್ದಾರ ಸ್ಟಾಂಪಿಟ್ ತಂಡದ ಶಿಫಾರಸ್ಸಿನಂತೆ ಸಂಗ್ರಾಂ ಸೇರಿ ಮೂವರು ಅಧಿಕಾರಿಗಳನ್ನು ಅಮಾನತ್ತುಗೊಳಿಸಿದ್ದೆ. ಬಹುಶಃ ಇದರಿಂದಾಗಿಯೇ ಸಂಗ್ರಾಂಸಿಂಗ್ ತಮ್ಮ ಮೇಲೆ ಆರೋಪ ಹೊರಿಸಿರಬಹುದು ಎಂದು ಖರ್ಗೆ ವಿಶ್ಲೇಷಿಸಿದರು.
ರಾಜ್ ಬಿಡುಗಡೆಗೆ 20 ಕೋಟಿ : ನರಹಂತಕ ವೀರಪ್ಪನ್ ಸೆರೆಯಿಂದ ವರನಟ ರಾಜ್ರನ್ನು ಬಿಡಿಸಲು 20 ಕೋಟಿ ರುಪಾಯಿ ನೀಡಲಾಗಿದೆ. ಈ ಹಣವನ್ನು ನಾನು ಪೊಲೀಸ್ ಅಧಿಕಾರಿಯಾಗಿದ್ದಾಗ, ಚೆನ್ನೈಗೆ ಹೋಗಿ ರಜನಿಕಾಂತ್ರ ಮೇನೇಜರ್ಗೆ 20 ಕೋಟಿ ರು. ತಲುಪಿಸಿ ಬಂದಿದ್ದೇನೆ ಎಂದೂ ಸಂಗ್ರಾಂಸಿಂಗ್ ಹೇಳಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications