ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ರಾವಿಡ್‌, ಸುಧಾಮೂರ್ತಿ, ಇಕ್ಬಾಲ್‌, ಶಿವಾಜಿಗೆ ಕೆಂಪೇಗೌಡ ಪ್ರಶಸ್ತಿ

By Staff
|
Google Oneindia Kannada News

ದ್ರಾವಿಡ್‌, ಸುಧಾಮೂರ್ತಿ, ಇಕ್ಬಾಲ್‌, ಶಿವಾಜಿಗೆ ಕೆಂಪೇಗೌಡ ಪ್ರಶಸ್ತಿ
ಜುಲೈ 11ರ ಭಾನುವಾರ ಮುಖ್ಯಮಂತ್ರಿ ಧರ್ಮಸಿಂಗ್‌ರಿಂದ ಪ್ರಶಸ್ತಿ ಪ್ರದಾನ

ಬೆಂಗಳೂರು : ರಂಗತಜ್ಞ ಇಕ್ಬಾಲ್‌ ಅಹಮದ್‌, ಕ್ರಿಕೆಟಿಗ ರಾಹುಲ್‌ ದ್ರಾವಿಡ್‌, ಪತ್ರಕರ್ತ ಶಿವಾಜಿ ಗಣೇಶನ್‌, ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ, ಪತ್ರಕರ್ತ ಶಿವಾಜಿ ಗಣೇಶನ್‌ ಸೇರಿದಂತೆ 15 ಗಣ್ಯರಿಗೆ 2004ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಯನ್ನು ಬೆಂಗಳೂರು ಮಹಾನಗರ ಪಾಲಿಕೆ ಪ್ರಕಟಿಸಿದೆ.

ಬೆಂಗಳೂರು ಮಹಾನಗರದ ಮೇಯರ್‌ ಪಿ.ಆರ್‌.ರಮೇಶ್‌ 2004 ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಗಳನ್ನು ಗುರುವಾರ (ಜು.8) ಪ್ರಕಟಿಸಿದರು. ಜುಲೈ 11ರಂದು ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಪ್ರಶಸ್ತಿ ಪ್ರದಾನ ಮಾಡುವರು. ಕೆಂಪೇಗೌಡ ಗೋಪುರದ ಬೆಳ್ಳಿ ಸ್ಮರಣಿಕೆ ಹಾಗೂ ಪ್ರಶಂಸಾ ಪತ್ರವನ್ನು ಪ್ರಶಸ್ತಿ ಒಳಗೊಂಡಿದೆ.

ಪರಿಸರವಾದಿ ಅ.ನ.ಯಲ್ಲಪ್ಪರೆಡ್ಡಿ , ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಹಾಗೂ ಲೇಖಕ ಅಗ್ರಹಾರ ಕೃಷ್ಣಮೂರ್ತಿ ಪ್ರಶಸ್ತಿ ಆಯ್ಕೆ ಮಂಡಳಿಯಲ್ಲಿದ್ದರು ಎಂದು ಮೇಯರ್‌ ರಮೇಶ್‌ ತಿಳಿಸಿದರು.

ಪ್ರಶಸ್ತಿ ವಿಜೇತರ ಹೆಸರುಗಳು ಕೆಳಗಿನಂತಿವೆ :

ಕ್ರೀಡೆ : ರಾಹುಲ್‌ ದ್ರಾವಿಡ್‌, ಸಿ.ಕೆ.ಕೃಷ್ಣ ಜೆಟ್ಟಿ ಹಾಗೂ ಜೆ. ಸವಿತಾ
ಸಮಾಜಸೇವೆ : ಸುಧಾಮೂರ್ತಿ (ಇನ್ಫೋಸಿಸ್‌ ಪ್ರತಿಷ್ಠಾನ)
ಶಿಕ್ಷಣ : ಪ್ರೊ. ಕೆ.ಇ.ರಾಧಾಕೃಷ್ಣ
ಕಲೆ : ಎನ್‌. ನರಸಿಂಹಾಚಾರ್‌
ರಂಗಭೂಮಿ : ಇಕ್ಬಾಲ್‌ ಅಹಮದ್‌
ಸಾಹಿತ್ಯ : ಡಾ.ಕೆ. ಮರುಳಸಿದ್ಧಪ್ಪ
ವೈದ್ಯಕೀಯ : ಡಾ. ಬಿ.ರಮೇಶ್‌
ಪತ್ರಿಕೋದ್ಯಮ : ಶಿವಾಜಿ ಗಣೇಶನ್‌ (ಪ್ರಜಾವಾಣಿ)
ಪರಿಸರ : ಅಲ್‌ಮಿತ್ರಾ ಪಟೇಲ್‌
ವಿಜ್ಞಾನ : ಡಾ.ಎಚ್‌.ಶರತ್‌ಚಂದ್ರ
ಕೈಗಾರಿಕೆ : ವಾಮನಾಚಾರ್‌
ನಾಗರಿಕ ಸೇವೆ : ಎಂ.ಮಹದೇವ
ನಗೆಕೂಟ : ಬಿ.ಕೆ.ಸತ್ಯನಾರಾಯಣ

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X