ಹೈಕೋರ್ಟ್‌ ಪೀಠ : ಹೋರಾಟ ಸಮಿತಿಯಿಂದ ಜುಲೈ 15ರ ಗಡುವು

ಹೈಕೋರ್ಟ್‌ ಪೀಠ : ಹೋರಾಟ ಸಮಿತಿಯಿಂದ ಜುಲೈ 15ರ ಗಡುವು
ಪೀಠ ಸ್ಥಾಪನೆಗೆ 150 ಕೋಟಿ ರುಪಾಯಿ ನಿಧಿ ಮೀಸಲಿಡಲು ಆಗ್ರಹ

ಧಾರವಾಡ : ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯ ಕುರಿತು ಅಂತಿಮ ನಿರ್ಣಯವನ್ನು ಜುಲೈ 15ರ ಮೊದಲು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಅಂದಿನಿಂದಲೇ ಶಾಲಾ-ಕಾಲೇಜು, ಕೋರ್ಟ್‌ ಕಲಾಪ , ಸರಕಾರಿ ಆಡಳಿತ ಯಂತ್ರಗಳನ್ನು ಸ್ಥಗಿತಗೊಳಿಸುವ ಚಳವಳಿ ಹಮ್ಮಿಕೊಳ್ಳುವುದಾಗಿ ಹೈಕೋರ್ಟ್‌ ಪೀಠ ಹೋರಾಟ ಸಮಿತಿ ಎಚ್ಚರಿಸಿದೆ.

ಜುಲೈ 6ರ ಮಂಗಳವಾರ ನಡೆದ ಹೈಕೋರ್ಟ್‌ ಪೀಠ ಹೋರಾಟ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಹೈಕೋರ್ಟ್‌ ಪೀಠ ಸ್ಥಾಪನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗಾಗಿ ಸರಕಾರ 150 ಕೋಟಿ ರೂಪಾಯಿ ನಿಧಿ ನಿಗದಿಪಡಿಸಬೇಕು ಹಾಗೂ ಕೂಡಲೇ ಮಖ್ಯನ್ಯಾಯಮೂರ್ತಿಗಳನ್ನು ಭೇಟಿಯಾಗಿ ಪೀಠ ಸ್ಥಾಪನೆಯ ಕುರಿತು ಚರ್ಚಿಸಬೇಕು ಎಂದು ಸಭೆ ಆಗ್ರಹಿಸಿದೆ.

ಹೈಕೋರ್ಟ್‌ ಪೀಠ ಹೋರಾಟ ಸಮಿತಿ ಅಧ್ಯಕ್ಷ ಬಿ.ಡಿ.ಹೀರೇಮಠ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ - ಶಾಸಕರಾದ ಬಸವರಾಜ ಹೊರಟ್ಟಿ , ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಮುಂತಾದವರು ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+