Get Updates
Get notified of breaking news, exclusive insights, and must-see stories!

ರೈಲ್ವೆ ಬಜೆಟ್‌ 2004-05: ರಕ್ಷಣೆಗೆ ಒತ್ತು , ಪ್ರಯಾಣದರ ಯಥಾಸ್ಥಿತಿ

ರೈಲ್ವೆ ಬಜೆಟ್‌ 2004-05: ರಕ್ಷಣೆಗೆ ಒತ್ತು , ಪ್ರಯಾಣದರ ಯಥಾಸ್ಥಿತಿ
ಬೆಂಗಳೂರು-ಹಾಸನ ನಡುವೆ ನೂತನ ರೈಲು ಮಾರ್ಗ, ಪ್ರತಿಪಕ್ಷಗಳಿಂದ ರೈಲ್ವೆ ಬಜೆಟ್‌ ಮಂಡನೆಯ ಸದನಕ್ಕೆ ಬಹಿಷ್ಕಾರ

ನವದೆಹಲಿ : ಯಾವುದೇ ವರ್ಗದ ಪ್ರಯಾಣದರದಲ್ಲಿ ಹೆಚ್ಚಳವಿಲ್ಲ . 32 ಹೊಸ ರೈಲುಗಳು ಹಳಿಗೆ ಹಾಗೂ ರೈಲ್ವೆ ಪ್ರಯಾಣಿಕರ ಸುರಕ್ಷಣೆಗೆ ಹೆಚ್ಚಿನ ಒತ್ತು . ಇದು 2004-05ರ ರೈಲ್ವೆ ಬಜೆಟ್‌ನ ಧ್ಯೇಯವಾಕ್ಯ.

ಕೇಂದ್ರ ರೈಲ್ವೆ ಸಚಿವ ಲಾಲೂಪ್ರಸಾದ್‌ ಯಾದವ್‌ ಜುಲೈ 6, ಮಂಗಳವಾರ ಬೆಳಗ್ಗೆ ಲೋಕಸಭೆಯಲ್ಲಿ 2004-05ರ ರೈಲ್ವೆ ಬಜೆಟ್‌ ಮಂಡಿಸಿದರು.

ಲಾಲೂ ರೈಲು ಬಜೆಟ್‌ ಮಂಡಿಸುವ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಪ್ರತಿಪಕ್ಷಗಳು ಸದನವನ್ನು ಬಹಿಷ್ಕರಿಸಿವೆ. ಕಳಂಕಿತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವ ಪ್ರಧಾನಿ ಮನಮೋಹನ್‌ಸಿಂಗ್‌ರ ನಿರ್ಧಾರವನ್ನು ವಿರೋಧಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಬಹಿಷ್ಕಾರ ಬಜೆಟ್‌ಗೆ ಮಾತ್ರ ಸೀಮಿತವಾಗಿದೆ ಎಂದು ಬಜೆಟ್‌ ಮಂಡನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅಡ್ವಾಣಿ ಹೇಳಿದರು.

ಹಾಸನ-ಬೆಂಗಳೂರು ಮಾರ್ಗ : ಹಾಸನ ಹಾಗೂ ಬೆಂಗಳೂರು ನಡುವೆ ನೂತನ ರೈಲ್ವೆ ಮಾರ್ಗ ನಿರ್ಮಾಣ ಸೇರಿದಂತೆ 273 ಕಿಮೀಗಳ ನೂತನ ರೈಲ್ವೆ ಹಳಿ ನಿರ್ಮಿಸಲು ಭಾರತೀಯ ರೈಲ್ವೆ ಉದ್ದೇಶಿಸಿದೆ. ಹೊಸದಾಗಿ ರೈಲು ಮಾರ್ಗ ನಿರ್ಮಿಸಲು ಉದ್ದೇಶಿಸಿರುವ ಸ್ಥಳಗಳು : ಹಾಸನ-ಬೆಂಗಳೂರು, ಚಂಡೀಗಢ-ಮೊರಿಂಡ-ಲೂಧಿಯಾನ ಹಾಗೂ ಕಾಕಿನಾಡ-ಕೊಟಿಪಲ್ಲಿ .

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+