Get Updates
Get notified of breaking news, exclusive insights, and must-see stories!

ತವರು ಬೈರಾಪಟ್ಟಣದಲ್ಲಿ ವೆಂಕಟಗಿರಿಗೌಡರಿಗೆ ‘ಅಂತಿಮ ನಮಸ್ಕಾರ’

ತವರು ಬೈರಾಪಟ್ಟಣದಲ್ಲಿ ವೆಂಕಟಗಿರಿಗೌಡರಿಗೆ ‘ಅಂತಿಮ ನಮಸ್ಕಾರ’
ರೈಲ್ವೆ ಬಜೆಟ್‌ನಿಂದಾಗಿ ದೆಹಲಿಯಲ್ಲೇ ಉಳಿದ ಪ್ರಧಾನಿ ಮನಮೋಹನ್‌ಸಿಂಗ್‌

ಬೆಂಗಳೂರು : ಶೋಕತಪ್ತ ನೂರಾರು ಅಭಿಮಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಒಕ್ಕಲಿಗರ ಸಂಘದ ಅಧ್ಯಕ್ಷ ಪ್ರೊ.ಕೆ.ವೆಂಕಟಗಿರಿ ಗೌಡರ ಅಂತ್ಯಕ್ರಿಯೆ ಮಂಗಳವಾರ ನಡೆಯಿತು.

ವೆಂಕಟಗಿರಿಗೌಡರ ಹುಟ್ಟೂರು ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣದಲ್ಲಿ ನಡೆದ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಗೌಡರ ಬಂಧು ಬಳಗ, ವಿದ್ಯಾರ್ಥಿಗಳು, ಅಭಿಮಾನಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ, ಶಾಸಕ ಸಿ.ಪಿ.ಯೋಗೀಶ್ವರ್‌, ಮಾಜಿ ಸಂಸದ ಜಿ.ಪುಟ್ಟಸ್ವಾಮಿಗೌಡ, ನ್ಯಾಯಮೂರ್ತಿ ಗೋಪಾಲಗೌಡ, ನ್ಯಾಯಮೂರ್ತಿ ಎಚ್‌.ಆರ್‌.ನಾಯಕ್‌, ಮಾಜಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣರ ಪತ್ನಿ ಪ್ರೇಮಾ ಕೃಷ್ಣ ಮುಂತಾದವರು ಹಾಜರಿದ್ದರು.

ಪ್ರಧಾನಿ ಮನಮೋಹನ್‌ಸಿಂಗ್‌ ಉಪಸ್ಥಿತಿಯನ್ನು ವೆಂಕಟಗಿರಿಗೌಡರ ಅಂತ್ಯಕ್ರಿಯೆಗೆ ನಿರೀಕ್ಷಿಸಲಾಗಿತ್ತು . ಆದರೆ ರೈಲ್ವೆ ಬಜೆಟ್‌ನ ಹಿನ್ನೆಲೆಯಲ್ಲಿ ಪ್ರಧಾನಿ ದೆಹಲಿಯಲ್ಲೇ ಉಳಿದರು.

ಮುಖ್ಯಮಂತ್ರಿ ಧರ್ಮಸಿಂಗ್‌ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ವೆಂಕಟಗಿರಿಗೌಡರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ವೆಂಕಟಗಿರಿಗೌಡ: ಭೈರಾಪಟ್ಣದಿಂದ ಬ್ರಿಟನ್‌ವರೆಗೆ

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+