Get Updates
Get notified of breaking news, exclusive insights, and must-see stories!

ಹೊನ್ನಾಳಿ :ಲೋಕಾಯುಕ್ತ ಸಮ್ಮುಖದಿ ನಾಗರಿಕರ ಚಚ್ಚಿದ ಪೊಲೀಸರು

ಹೊನ್ನಾಳಿ :ಲೋಕಾಯುಕ್ತ ಸಮ್ಮುಖದಿ ನಾಗರಿಕರ ಚಚ್ಚಿದ ಪೊಲೀಸರು
ಇಬ್ಬರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ದಾವಣಗೆರೆ : ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ವೆಂಕಟಾಚಲರ ಸಮ್ಮುಖದಲ್ಲಿ , ದಾವಣಗೆರೆಗೆ 50 ಕಿ.ಮೀ. ದೂರದ ಹೊನ್ನಾಳಿ ಗ್ರಾಮದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಜುಲೈ 5ರ ಸೋಮವಾರ ಪೊಲೀಸರು ಬೆತ್ತ ಪ್ರಹಾರ ನಡೆಸಿದ ಘಟನೆ ನಡೆಯಿತು.

ಲೋಕಾಯುಕ್ತ ರ ಎದುರಿನಲ್ಲಿ ಆರೋಪಿ ವೈದ್ಯಕೀಯ ಅಧಿಕಾರಿಗಳ ಪರ ವಿರೋಧ ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ವೈದ್ಯ ಅಧಿಕಾರಿಗಳ ಬೆಂಬಲಕ್ಕೆ ಕೆಲವರು ನಿಂತರೆ, ಹೆಚ್ಚಿನ ಸಂಖ್ಯೆಯ ನಾಗರಿಕರು ಅಧಿಕಾರಿಗಳ ವಿರುದ್ಧ ಹರಿಹಾಯತೊಡಗಿದರು. ಈ ವಾಗ್ವಾದ ತಾರಕಕ್ಕೇರಿದ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು. ಈ ಪ್ರಹಾರದಲ್ಲಿ ಅನೇಕ ಮಂದಿ ಗಾಯಗೊಂಡಿದ್ದು , ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಗಾಯಗೊಂಡವರನ್ನು ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಲಾಠಿ ಚಾರ್ಜ್‌ ಬಗೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು , ಉಪ ಪೊಲೀಸ್‌ ಅಧೀಕ್ಷಕ ಬಸವರಾಜಪ್ಪನವನ್ನು ಘರಾವ್‌ ಮಾಡಿದರು. ಲಾಠಿ ಚಾರ್ಜ್‌ಗೆ ಕಾರಣ ತಿಳಿ ಸಬೇಕೆಂದು ಒತ್ತಾಯಿಸಿದ ನಾಗರಿಕರು, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+