‘ಆನ್ಲೈನ್ ಲಾಟ್ರಿನಮಗೂ-ಸರ್ಕಾರಕ್ಕೂ ಅನ್ನ, ನಿಷೇಧ ಯಾಕಣ್ಣ?’
‘ಆನ್ಲೈನ್
ಲಾಟ್ರಿನಮಗೂ-ಸರ್ಕಾರಕ್ಕೂ
ಅನ್ನ,
ನಿಷೇಧ
ಯಾಕಣ್ಣ?’
ತ್ರಿಮೂರ್ತಿಗಳ
ಬಳಿಗೆ
ರಾಜ್ಯ
ಆನ್ಲೈನ್
ಲಾಟರಿ
ಮಾರಾಟಗಾರರ
ಸಂಘದ
ಅಹವಾಲು
ಆನ್ಲೈನ್ ಲಾಟರಿ ಮಾರಾಟದ ವಿರುದ್ಧ ನಿಷೇಧ ಹೇರದಿರುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ರಾಜ್ಯ ಆನ್ಲೈನ್ ಲಾಟರಿ ಮಾರಾಟಗಾರರ ಸಂಘದ ಸದಸ್ಯರು ಮನವಿ ಸಲ್ಲಿಸಿದ್ದಾರೆ.
ಆನ್ಲೈನ್ ಲಾಟರಿ ನಿಷೇಧ ಕೂಡದು. ಆನ್ಲೈನ್ ಲಾಟರಿ ಮೇಲಿನ ನಿಷೇಧ ಒಂದು ಅಂಕಿ ಲಾಟರಿ ಹಾಗೂ ಮಟ್ಕಾದಂಥ ಜೂಜಿನ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಆನ್ಲೈನ್ ಲಾಟರಿ ಶುರುವಾದ ನಂತರ ಮಟ್ಕಾ ಹಾಗೂ ಒಂದಂಕಿ ಲಾಟರಿ ಹತೋಟಿಗೆ ಬಂದಿದೆ ಎಂದೂ ಮನವಿ ಪತ್ರದಲ್ಲಿ ಹೇಳಲಾಗಿದೆ.
ಪಾರದರ್ಶಕತೆ ಹಾಗೂ ನಂಬಿಕೆಗೆ ಆನ್ಲೈನ್ ಲಾಟರಿ ಹೆಸರಾಗಿದೆ. ಆನ್ಲೈನ್ ಲಾಟರಿಯಿಂದಾಗಿ ಸರ್ಕಾರ ಒಂದು ವರ್ಷದ ಅವಧಿಯಲ್ಲೇ 100 ಕೋಟಿ ರುಪಾಯಿ ಆದಾಯ ಗಳಿಸಿದೆ. ಇದು ಯಾವುದೇ ಒಂದು ರಾಜ್ಯ ಸರ್ಕಾರ ವರ್ಷದ ಅವಧಿಯಲ್ಲಿ ಲಾಟರಿ ಮೂಲಕ ಗಳಿಸಿರುವ ದಾಖಲೆ ಆದಾಯವಾಗಿದೆ. ಲಕ್ಷಾಂತರ ಮಂದಿಗೆ ಅನ್ನ ನೀಡುತ್ತಿರುವ ಆನ್ಲೈನ್ ಲಾಟರಿಯ ನಿಷೇಧ ಸರಿಯಲ್ಲ ಎಂದು ಮಾರಾಟಗಾರರ ಸಂಘದ ಮನವಿ ಹೇಳಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು