ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪಾಲದಲ್ಲಿ ಕರಳುಬೇನೆ ನಿಯಂತ್ರಣದಲ್ಲಿದೆ ನಿಯಂತ್ರಣದಲ್ಲಿದೆ!

By Staff
|
Google Oneindia Kannada News

ಮಣಿಪಾಲದಲ್ಲಿ ಕರಳುಬೇನೆ ನಿಯಂತ್ರಣದಲ್ಲಿದೆ ನಿಯಂತ್ರಣದಲ್ಲಿದೆ!
ಉಡುಪಿ ಹಾಗೂ ಮಣಿಪಾಲ್‌ ನಾಗರಿಕರಿಗೆ ಕ್ಲೋರಿನ್‌ಯುಕ್ತ ನೀರು

ಮಣಿಪಾಲ : ಕಳೆದ ಹದಿನೈದು ದಿನಗಳಿಂದ ಮಣಿಪಾಲ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಕಾಲರಾ ಪ್ರಸ್ತುತ ಹತೋಟಿಗೆ ಬಂದಿದೆ.

ಕಳೆದ ಆರು ದಿನಗಳಿಂದ ಕಾಲರಾದ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಎಸ್‌.ಆರ್‌.ಉಮಾಶಂಕರ್‌ ಮಂಗಳವಾರ (ಜೂ.29) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಳೆದ ವಾರ ಕೆಎಂಸಿ ಆಸ್ಪತ್ರೆಗೆ 30 ಮಂದಿ ಕಾಲರಾ ರೋಗಿಗಳು ದಾಖಲಾಗಿದ್ದರು. ಅವರುಗಳೆಲ್ಲ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಉಮಾಶಂಕರ್‌ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೀತಿಸಂಹಿತೆಯನ್ನು ಪಾಲಿಸದ ಮಣಿಪಾಲದಲ್ಲಿನ ಮೂರು ಹೊಟೇಲುಗಳ ಪರವಾನಗಿಯನ್ನು ರದ್ದು ಪಡಿಸಲಾಗಿದೆ. ಇದಕ್ಕೂ ಮುನ್ನ ನಾಲ್ಕು ಹೊಟೇಲು ಹಾಗೂ ಮೊಬೈಲ್‌ ಕ್ಯಾಂಟೀನುಗಳನ್ನು ಮುಚ್ಚಲಾಗಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಉಡುಪಿ ಹಾಗೂ ಮಣಿಪಾಲ್‌ಗಳಲ್ಲಿ ಕ್ಲೋರಿನ್‌ಯುಕ್ತ ನೀರನ್ನು ಜನತೆಗೆ ಪೂರೈಸುವಂತೆ ಉಡುಪಿ ನಗರ ಮುನಿಸಿಪಾಲಿಟಿಗೆ ಸೂಚಿಸಲಾಗಿದೆ. ತನ್ನ ಆಸ್ಪತ್ರೆಯ ಜೈವಿಕ ತ್ಯಾಜ್ಯಗಳನ್ನು ಹೂಳುವಂತೆ ಅಥವಾ ಕುದಿಸಿ ವಿಸರ್ಜಿಸುವಂತೆ ಕೆಎಂಸಿ ಆಸ್ಪತ್ರೆ ಆದೇಶ ಹೊರಡಿಸಿದೆ ಎಂದು ಉಮಾಶಂಕರ್‌ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X